ಮೈಸೂರು : ಡಿಸೆಂಬರ್ನಲ್ಲಿ ಮೈಸೂರಿನಲ್ಲಿ ಹೊಸ ಮನೆ ಗೃಹ ಪ್ರವೇಶಕ್ಕೆ ಸಿಎಂ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ಆದರೆ, ಸಿಎಂ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.

ಮೈಸೂರಿನ ಕುವೆಂಪು ನಗರದಲ್ಲಿ 80 & 120 ಅಳತೆಯಲ್ಲಿ ಹೊಸ ಮನೆಯನ್ನು ಸಿಎಂ ಕಟ್ಟಿಸಿದ್ದಾರೆ. ಮನೆಯ ಕೆಲಸ ಮುಗಿದಿದೆ. ಆದರೆ, ಹೊಸ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಮಾತ್ರ ಸಿಗುತ್ತಿಲ್ಲ. ವಿದ್ಯುತ್ ಸಂಪರ್ಕ ಸಿಗದೆ ಗೃಹಪ್ರವೇಶ ಮಾಡಲು ಆಗಲ್ಲ. ಗೃಹ ಪ್ರವೇಶ ಮಾಡಿದರೂ ಮನೆಯಲ್ಲಿ ವಾಸಿಸಲು ಆಗಲ್ಲ. ಹೀಗಾಗಿ, ಸಿಎಂಗೆ ಸಮಸ್ಯೆ ಎದುರಾಗಿದೆ
ಹೊಸ ಮನೆ ವಿದ್ಯುತ್ ಸಂಪರ್ಕಕ್ಕೆ ಈಗ ಓಸಿ ಅಂದರೆ ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಈ ಪತ್ರವನ್ನು ಸಿಎಂ ಸಲ್ಲಿಸದ ಕಾರಣ ವಿದ್ಯುತ್ ನಿಗಮವು ಸಿಎಂ ಕುಟುಂಬದ ಅರ್ಜಿಯನ್ನು ಪುರಸ್ಕರಿಸಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಉಡುಪಿ | ಪಾಕಿಸ್ತಾನ ಪರ ಗೂಢಚರ್ಯೆ.. ಮಲ್ಪೆ ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಇಬ್ಬರ ಬಂಧನ!



















