ಬೆಂಗಳೂರು: ಕೋರ್ಟ್ ಛೀಮಾರಿ ಹಾಕಿದ ಮೇಲೆ ಎಫ್ ಐಆರ್ ಹಾಕಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ವಿಜಯೇಂದ್ರ ಮಾತನಾಡಿದ್ದಾರೆ. ಸಿಎಂ ಟ್ವೀಟ್ ಮಾಡಿದ್ದಕ್ಕೆ ಆರ್ ಸಿಬಿ ಹೆಮ್ಮೆ ವ್ಯಕ್ತಪಡಿಸಿತ್ತು. ತಾವು ಮಾಡಿದ ತಪ್ಪಿಗೆ ಈಗ ಕಮಿಷನರ್ ಸೇರಿದಂತೆ ಪೊಲಿಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸರ್ಕಾರವು ತನ್ನ ತಪ್ಪು ಒಪ್ಪಿಕೊಂಡಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲಿಸರನ್ನು ಹರಕೆಯ ಕುರಿ ಮಾಡಿದ್ದಾರೆ. ಇಂಟೆಲಿಜೆನ್ಸ್ ಫೇಲ್ಯೂವರ್ ಆಗಿದೆ ಅಂದಿದ್ದಾರೆ. ಆದರೆ, ಯಾವ ಕಾರಣಕ್ಕೆ ಇಂಟೆಲಿಜೆನ್ಸಿ ಅಧಿಕಾರಿ ಅಮಾನತು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಬಳಿ ಗುಪ್ತಚರ ಇಲಾಖೆ ಇದೆ. ಅವರ ಬುಡಕ್ಕೆ ಬರುತ್ತೆ ಎಂದು ಗುಪ್ತಚರ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ. KSCA , RCB,DNA ಮೂವರ ಮೇಲೆ ಆರೋಪ ಹೊರಿಸಿದ್ದಾರೆ. ಆ 3 ಸಂಸ್ಥೆ ಮೇಲೆ ಕೇಸ್ ಹಾಕಿದೀರಾ? ಆದರೆ ನಿಜವಾಗಿಯೂ ಇದರಲ್ಲಿ ಸಿಎಂ ಮೊದಲ ಆರೋಪಿ, ಡಿಸಿಎಂ ಎರಡನೆ ಆರೋಪಿ, ಗೃಹ ಸಚಿವರು ಮೂರನೆ ಆರೋಪಿ ಆಗಬೇಕು. ಕೂಡಲೇ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.