ಹಾವೇರಿ: ಕಾಂಪೌಂಡ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರು ಹೊಡೆದಾಡಿಕೊಂಡಿರುವ ಘಟನೆ ಹಾನಗಲ್ ತಾಲೂಕಿನ ಕುಂಟನಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಅಕ್ಬರ್ ಸಾಬ್ ಎಂಬಾತರು ಪಂಚಾಯಿತಿ ವತಿಯಿಂದ ಮನೆ ಜಾಗ ಅಳತೆ ಬಳಿಕ ತಮ್ಮ ಮನೆಗೆ ಕಾಂಪೌಂಡ್ ಹಾಕಿಸಿದ್ದರು. ಕಾಂಪೌಂಡ್ ತೆರವು ಮಾಡಿ ಎಂದು ಹಜರತ್ ಅಲಿ ಕುಟುಂಬ ತಕರಾರು ಮಾಡಿತ್ತು. ಈ ವೇಳೆ ಎರಡೂ ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದಿದೆ.
ಈ ವೇಳೆ ಹಜರತ್ ಕುಟುಂಬ ಅಕ್ಬರ್ ಮನೆಯ ಕಾಂಪೌಂಡ್ ದ್ವಂಸಗೊಳಿಸಿ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಜರತ್ ಅಲಿ, ಮುಬಾರಕ್, ಅಷ್ಬಾಕ್, ಇನಾಯತ್, ಮೌಲಾಲಿ, ಮೈಮುನ್ನಿಸಾ, ಮಲ್ಲಿಕ್ ಮೇಲೆ ಪ್ರಕರಣ ದಾಖಲಾಗಿದೆ.