ಮಂಡ್ಯ : ವೈರಮುಡಿ ಉತ್ಸವದಲ್ಲಿ ಸಚಿವ ಚಲುವರಾಯಸ್ವಾಮಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹಲವು ಬಾರಿ ಮಂತ್ರಿ ಆಗಿದ್ದಾಗಲೂ ವೈರಮುಡಿ ಉತ್ಸವದಲ್ಲಿ ಪಾಲ್ಗೊಂಡಿದ್ದೆ. ಚಲುವನಾರಾಯಣಸ್ವಾಮಿ ನಮ್ಮ ಮನೆ ದೇವರು. ಸರ್ಕಾರದ ಪ್ರತಿನಿಧಿಯಾಗಿ ಮನೆ ದೇವರ ಉತ್ಸವದಲ್ಲಿ ಭಾಗವಹಿಸುವುದು ಹೆಮ್ಮೆ ಅನಿಸುತ್ತದೆ ಎಂದರು.
ದೇವಸ್ಥಾನದಲ್ಲಿ ಎಚ್ ಡಿಕೆ ಎದುರಾದ ವಿಷಯವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ನನಗೆ ಅತ್ಯಂತ ಹತ್ತಿರದ ಸ್ನೇಹಿತರು. ಕುಮಾರಸ್ವಾಮಿ ಹಾಗೂ ನನ್ನ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯವಿದೆ. ವೈಯಕ್ತಿಕವಾಗಿ ನಾನು ಅವರನ್ನು ದ್ವೇಷ ಮಾಡುವುದಿಲ್ಲ. ಅವರಿಗೆ ಒಳ್ಳೆಯದಾಗಲಿ, ಮಂತ್ರಿ ಆಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡಲಿ. ಅವರು ನನಗೆ ನಮಸ್ಕಾರ ಮಾಡಿದರು. ನಾನು ಮಾಡಿದೆ. ನಾನು ಈ ಹಿಂದೆ ಕೂಡ ಅವರನ್ನ ಭೇಟಿ ಆಗಿದ್ದೆ. ನಮ್ಮ ನಡುವೆ ವಯಕ್ತಿಕ ತಿಕ್ಕಾಟ ಇಲ್ಲಾ. ಮೊದಲಿನ ರೀತಿ ಪ್ರತಿದಿನ ಮಾತನಾಡಲ್ಲ. ಜೊತೆಗೆ ಊಟ ಮಾಡಲ್ಲ. ಅವರನ್ನ ನಾನು ಮಿಸ್ ಮಾಡ್ಕೊಳ್ತಿನಿ ಅಂತ ಏನಿಲ್ಲ. ಬಹಳ ದೂರ ಆಗಿರುವುದರಿಂದ ಆ ರೀತಿ ಅನಿಸಿಲ್ಲ ಎಂದಿದ್ದಾರೆ.