ಕೆಲವರಿಗೆ ದೇಹದ ಒಳಗಿನ ಅಂಗಾಂಗಗಳಲ್ಲಿ ಸಮಸ್ಯೆಗಳು ಉಂಟಾದರೆ ಇನ್ನೂ ಕೆಲವರಿಗೆ ಅವರ ದೇಹದ ಮೇಲಿನ ಚರ್ಮದಲ್ಲಿ ಆರೋಗ್ಯ ಸಮಸ್ಯೆಗಳು ಕಾಣತೊಡಗುತ್ತವೆ. ಈ ಸಮಸ್ಯೆಗಳಲ್ಲಿ ವಿರಳವಾಗಿ ಇರುವುದು ಮತ್ತು ಬಹು ಮುಖ್ಯ ಚರ್ಮದ ಸಮಸ್ಯೆ ಎಂದರೆ ಅದು ಕಾಲುಗಳಲ್ಲಿ ಉಂಟಾಗುವ ಆಣಿಗಳು.
ಕಾಲಿನಲ್ಲಿನ ಆಣಿ ಗಂಭೀರ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಪಾದಗಳ ಅಡಿಭಾಗದಲ್ಲಿ ಈ ರೀತಿಯ ದಪ್ಪ ಚರ್ಮವನ್ನು ಕಂಡುಕೊಳ್ಳುತ್ತಾರೆ. ನೀವು ಅದನ್ನು ತಪ್ಪಿಸಲು ಬಯಸಿದರೆ, ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ಗಮನ ಕೊಡಿ. ನೀವು ಪ್ರತಿ ಬಾರಿ ಹೊರಗೆ ಬಂದಾಗ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಮಧುಮೇಹಿಗಳು ಬಿಗಿಯಾದ ಬೂಟುಗಳನ್ನು ಧರಿಸುವುದನ್ನು ತಪ್ಪಿಸಬೇಕು. ಅಲ್ಲದೆ ಕೊಳಕು ಕೈಗವಸುಗಳನ್ನು ಧರಿಸಬೇಡಿ. ಸ್ವಚ್ಛವಾದ ಕೈಗವಸುಗಳನ್ನು ಧರಿಸಿ. ಕಾಲಕಾಲಕ್ಕೆ ಕಾಲ್ಬೆರಳ ಉಗುರುಗಳನ್ನು ಟ್ರಿಮ್ ಮಾಡಿ. ಚರ್ಮವು ಒಣಗುವುದನ್ನು ತಡೆಯಲು ಪಾದದ ಅಡಿಭಾಗಕ್ಕೆ ಲೋಷನ್ ಅನ್ನು ಅನ್ವಯಿಸಿ.

ಕಾಲಿನ ಆಣಿಗಳು ಎಂದರೇನು?
ಸಾಮಾನ್ಯವಾಗಿ ಮನುಷ್ಯನ ಪಾದಗಳ ಅಕ್ಕ – ಪಕ್ಕ, ಮುಂಭಾಗ ಮತ್ತು ತಳಭಾಗದಲ್ಲಿ ವಿಪರೀತ ಬಿಸಿ ಮತ್ತು ಒತ್ತಡದಿಂದ ಚರ್ಮ ಇದ್ದಕ್ಕಿದ್ದಂತೆ ಗಟ್ಟಿಯಾಗಿ ಚಿತ್ರದಲ್ಲಿ ತೋರಿಸಿರುವಂತೆ ನೋಡಲು ದುಂಡಾಗಿ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಮುಟ್ಟಿದರೆ ವಿಪರೀತ ನೋವು. ಚಪ್ಪಲಿ ಮತ್ತು ಬೂಟು ತೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಮಗೆ ನೋವು ಕಂಡು ಬಂದರೂ, ಇದೇನು ಅಂತಹ ದೊಡ್ಡ ಮತ್ತು ಬಗೆಹರಿಸಲಾಗದ ಸಮಸ್ಯೆ ಅಲ್ಲ. ಅಂದರೆ ಆಣಿ ಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಮತ್ತು ಮುಂದೆ ಬರದಂತೆ ಕೂಡ ತಡೆಯಬಹುದು.

ಕಾಲಿನ ಆಣಿಗಳು ಉಂಟಾಗಲು ಕಾರಣವೇನು?
ಪ್ರತಿ ದಿನ ಬೂಟು ತೊಡುವ ಅಭ್ಯಾಸವಿದ್ದವರು ಅತ್ಯಂತ ಬಿಗಿಯಾದ ಬೂಟುಗಳನ್ನು ಧರಿಸಲು ಮತ್ತು ದಿನದಲ್ಲಿ ಬಹಳಷ್ಟು ಕಾಲ ಬೂಟುಗಳನ್ನು ತೊಟ್ಟುಕೊಂಡಿರುವವರಿಗೆ ಕಾಲಿನ ಆಣಿಗಳು ಸಾಮಾನ್ಯವಾಗಿ ಉಂಟಾಗುತ್ತವೆ. ಇನ್ನೂ ಬಹಳಷ್ಟು ಕಾಲ ನಿಂತುಕೊಂಡು ಕೆಲಸ ಮಾಡುವವರಿಗೆ ಮತ್ತು ಹೆಚ್ಚು ದೂರ ಬಿಸಿಲಿನಲ್ಲಿ ನಡೆಯುವವರಿಗೆ ದೇಹದ ತೂಕ ಮತ್ತು ಪಾದಗಳ ಬಿಸಿ ಕಾಲಿನ ತಳಭಾಗದಲ್ಲಿ ಬೊಬ್ಬೆಗಳ ರೀತಿಯಲ್ಲಿ ಆಣಿಗಳು ಉಂಟಾಗಲು ಕಾರಣವಾಗುತ್ತವೆ.

ಇದಕ್ಕೆ ಪರಿಹಾರವೇನು ?
ಇಂತಹ ಸಮಸ್ಯೆಗಳನ್ನು ಕೇವಲ ಆಸ್ಪತ್ರೆಯಲ್ಲಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಹಾಗೇನಿಲ್ಲ. ಸ್ವತಃ ಮನೆಯಲ್ಲಿ ಕೆಲವೊಂದು ಸರಳವಾದ ಮನೆಮದ್ದುಗಳಿಂದ ಪರಿಹಾರ ಮಾಡಿಕೊಳ್ಳಬಹುದು.
ನಿಂಬೆಹಣ್ಣಿನ ರಸ :

ಅರ್ಧ ಹೋಳು ನಿಂಬೆಹಣ್ಣನ್ನು ಹಿಂಡಿ ಅದನ್ನು ಆಣಿ ಆಗಿರುವ ಭಾಗಕ್ಕೆ ಹಚ್ಚಿ. ಚರ್ಮದ ಹೊರಗಿನ ಗಟ್ಟಿಯಾದ ಭಾಗ ಬಿದ್ದು ಹೋಗುವವರೆಗೆ ಇದೇ ರೀತಿ ಮಾಡಿ.
ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಮನೆಯಲ್ಲಿ ಮಾಡಬಹುದಾದ ಅತ್ಯಂತ ಸರಳವಾದ ಪರಿಹಾರ ಇದು ಎಂದು ನಂಬಬಹುದು. ಜೊತೆಗೆ ತುಂಬಾ ದೀರ್ಘಕಾಲದವರೆಗೆ ಯಾವುದೇ ಭಯವಿಲ್ಲದೆ ಈ ಪರಿಹಾರವನ್ನು ನೀವು ಬೇಕೆಂದಾಗ ಮಾಡಿಕೊಳ್ಳಬಹುದು.
ಮೂಲೇತಿ ಪುಡಿ:

ರಾತ್ರಿ ಹೊತ್ತು ಮಲಗುವಾಗ ಮೂಲೇತಿ ಪುಡಿಯನ್ನು ಸ್ವಲ್ಪ ನೀರು ಮುಟ್ಟಿಸಿ ಆ ಪುಡಿಯನ್ನು ಕ್ರಿಮಿನಂತೆ ಮಾಡಿಕೊಳ್ಳಿ ಬಳಿಕ ನಿಮಗೆಆಣಿ ಆಗಿರುವ ಭಾಗಕ್ಕೆ ಹಚ್ಚಿ.
ಆಣಿ ಕಡಿಮೆ ಆಗುವ ವರೆಗೂ ಈ ರೀತಿ ಮಾಡಿ. ಇದರಿಂದ ಕಡಿತ ಅಥವಾ ಉರಿ ಕಂಡುಬಂದರೆ ಈ ಪುಡಿಯನ್ನು ಹಚ್ಚಾಬೇಡಿ
ಬೆಳ್ಳುಳ್ಳಿ ಎಸಳು :

ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿದ್ದು ಬ್ಯಾಕ್ಟೀರಿಯ ಮತ್ತು ಫಂಗಲ್ ಸೋಂಕುಗಳನ್ನು ಇದು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕಾಲಿನ ಭಾಗದ ಆಣಿ ಸಮಸ್ಯೆ ಪರಿಹಾರಕ್ಕೆ ಕೆಲವೊಂದು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ರಾತ್ರಿ ಮಲಗುವ ಸಮಯದಲ್ಲಿ ಕಾಲಿಗೆ ಹಚ್ಚಬೇಕು.
ಮರುದಿನ ಬೆಳಗ್ಗೆ ಎದ್ದು ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದುಕೊಂಡು ಕೆಲವು ದಿನಗಳವರೆಗೆ ಪ್ರತಿರಾತ್ರಿ ಇದೇ ರೀತಿ ಮಾಡುತ್ತಾ ಬಂದರೆ ಅತ್ಯಂತ ಪರಿಣಾಮಕಾರಿಯಾಗಿ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ.
ವಿಟಮಿನ್-ಇ ಆಯಿಲ್:

ರಾತ್ರಿ ಮಲಗುವ ಸಮಯದಲ್ಲಿ ವಿಟಮಿನ್-ಇ ಆಯಿಲ್ ಕಾಲಿನ ಭಾಗಕ್ಕೆ ಹಚ್ಚಿದ ನಂತರ ಕಾಲುಚೀಲಗಳನ್ನು ಧರಿಸಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.
ಇದರಲ್ಲೂ ಸಹ ಬೆಳ್ಳುಳ್ಳಿ ರೀತಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಾಗಿದ್ದು ನಿಮ್ಮ ಆಣಿ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲವಾಗಿಸುತ್ತದೆ. ಮೆಡಿಕಲ್ ಶಾಪ್ ಗಳಲ್ಲಿ ವಿಟಮಿನ್-ಇ ಆಯಿಲ್ ಸುಲಭವಾಗಿ ಸಿಗುತ್ತದೆ.
ಬೇಕಿಂಗ್ ಸೋಡಾ :

ಸಾಧಾರಣವಾಗಿ ಬೇಕಿಂಗ್ ಸೋಡಾ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದೊಂದು ನೈಸರ್ಗಿಕ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ. ಚರ್ಮದ ಮೇಲ್ಭಾಗದಲ್ಲಿ ಕಂಡುಬರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಿ ಆರೋಗ್ಯಕರವಾದ ತ್ವಚೆ ನಿಮ್ಮದಾಗುವ ಹಾಗೆ ನೋಡಿಕೊಳ್ಳುತ್ತದೆ.
ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಕಾಲುಗಳನ್ನು ಬೇಕಿಂಗ್ ಸೋಡಾ ಬೆರೆಸಿದ ಬಿಸಿನೀರಿನಲ್ಲಿ ಅದ್ದಿ ಸುಮಾರು ಹದಿನೈದು ನಿಮಿಷಗಳು ಹಾಗೇ ಬಿಟ್ಟು ನಂತರ ಮೃದುವಾದ ಕಲ್ಲಿನಿಂದ ಕಾಲಿನ ಹಿಮ್ಮಡಿ ಗಳನ್ನು ಮತ್ತು ಆಣಿ ಉಂಟಾಗಿರುವ ಜಾಗವನ್ನು ಮಸಾಜ್ ಮಾಡಿ ಬೇಕಿಂಗ್ ಸೋಡಾ ತನ್ನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳಿಂದ ಸೋಂಕನ್ನು ನಿವಾರಣೆ ಮಾಡುತ್ತದೆ.
ಹರಳೆಣ್ಣೆ:

ಒಣ ಚರ್ಮದ ಸಮಸ್ಯೆಗೆ ಹರಳೆಣ್ಣೆ ಅತ್ಯುತ್ತಮ ಪರಿಹಾರ ಎಂದು ಹೇಳಬಹುದು. ಬಿಸಿನೀರಿನಲ್ಲಿ ಹರಳೆಣ್ಣೆಯನ್ನು ಮತ್ತು ಲಿಕ್ವಿಡ್ ಸೋಪ್ ಮಿಶ್ರಣ ಮಾಡಿ ಅದರಲ್ಲಿ ಸ್ವಲ್ಪ ಹೊತ್ತು ನಿಮ್ಮ ಕಾಲುಗಳನ್ನು ಅದ್ದಿ ಇಟ್ಟುಕೊಂಡು ಹೊರತೆಗೆದು ಪಾದಗಳ ಬಳಿ ಕಂಡುಬರುವ ಆಣಿಯನ್ನು ಪರಿಹಾರ ಮಾಡಿಕೊಳ್ಳಬಹುದು.
ಪೈನಾಪಲ್ :

ಪೈನಾಪಲ್ನಲ್ಲಿ ಸಿಹಿ ಹುಳಿಯ ಮಿಶ್ರಣ ಇರುವ ಜೊತೆಗೆ ಔಷಧೀಯ ಗುಣಗಳು ಸಹ ಇವೆ. ಅತ್ಯದ್ಭುತವಾಗಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ. ಚರ್ಮದ ಬಹುತೇಕ ಸಮಸ್ಯೆಗಳು ಅನಾನಸ್ ಬಳಕೆಯಿಂದ ಪರಿಹಾರ ಕಾಣುತ್ತದೆ.
ಕಾಲಿನಲ್ಲಿ ಆಣಿ ಉಂಟಾದಾಗ, ಅಲ್ಲಿ ಪೈನಾಪಲ್ ಚೂರುಗಳನ್ನು ಇಟ್ಟು ಒಂದು ಬಟ್ಟೆಯನ್ನು ಸುತ್ತಿ ಸ್ವಲ್ಪ ಹೊತ್ತು ಬಿಟ್ಟು ನಂತರ ಬಟ್ಟೆಯನ್ನು ತೆಗೆದು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಬಹುದು. ಇದರ ನಂತರದಲ್ಲಿ ಗಟ್ಟಿಯಾದ ಆಣಿಯ ಭಾಗ ಮೆತ್ತಗಾಗಿ ಕ್ರಮೇಣವಾಗಿ ವಾಸಿಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಕರ್ನಾಟಕ ನ್ಯೂಸ್ ಬೀಟ್ ಅದನ್ನು ಅನುಮೋದಿಸುವುದಿಲ್ಲ
ಇದನ್ನೂ ಓದಿ : ಶಾಂತಿನಗರದಲ್ಲಿ ಬೈಕ್ ಸವಾರನ ಸುಲಿಗೆ ಕೇಸ್ | ಮೂವರು ಆರೋಪಿಗಳ ಬಂಧನ



















