ಹಾವೇರಿ : ಗ್ಯಾರಂಟಿ ದಿವಾಳಿಗೆ ಕಾರಣ ಎನ್ನುತ್ತಿದ್ದ ಬಿಜೆಪಿ ಈಗ ನಮ್ಮನ್ನೇ ನಕಲು ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ 650 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಕರ್ನಾಟಕವು ಮೊದಲು ಐದು ಗ್ಯಾರಂಟಿಗಳನ್ನು ಕೊಟ್ಟಿದೆ. ನಾವು ಗ್ಯಾರಂಟಿಗಳನ್ನು ಘೋಷಿಸದ ನಂತರ ಬಿಜೆಪಿ ದಿವಾಳಿ ಅಂತಾಲ್ಲ ಆರೋಪ ಮಾಡಿತು. ಆದರೆ, ಈಗ ತಾನೇ ನಕಲು ಮಾಡಲು ಆರಂಭಿಸಿದೆ ಎಂದು ಗುಡುಗಿದ್ದಾರೆ.
ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹ ಲಕ್ಷ್ಮೀ , ಯುವನಿಧಿ ಯೋಜನೆಗಳನ್ನು ಜಾರಿಗೆ ತಂದು ನಾವು ನುಡಿದಂತೆ ನಡೆದಿದ್ದೇವೆ. ಇಷ್ಟೊಂದು ಗ್ಯಾರಂಟಿ ಕೊಟ್ಟರೂ ನಮ್ಮ ಖಜಾನೆ ಖಾಲಿಯಾಗಿಲ್ಲ. 2024-25 ರಲ್ಲಿ 3.71 ಲಕ್ಷ ಕೋಟಿ, ಪ್ರಸಕ್ತ ವರ್ಷಕ್ಕೆ 4.09 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದೇವೆ. ದುಡ್ಡಿಲ್ಲದಿದ್ದರೆ ಇಷ್ಟು ದೊಡ್ಡ ಬಜೆಟ್ ಮಂಡನೆ ಹೇಗೆ ಸಾಧ್ಯ? ಹಾನಗಲ್ ತಾಲೂಕಿನಲ್ಲಿ650 ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೇಗೆ ಚಾಲನೆ ನೀಡಲಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಹಲವಾರು ನಾಯಕರು ಈ ಸಂದರ್ಭದಲ್ಲಿದ್ದರು.