ಪುತ್ತೂರು: ಫೇಸ್ಬುಕ್ ಪೇಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಅಡಿರುವ ಹಿನ್ನೆಲೆ, ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅಮಳ ರಾಮಚಂದ್ರ ವಿರುದ್ಧ ಬಿಜೆಪಿಯಿಂದ ದೂರು ನೀಡಲಾಗಿದೆ.

ದೇಶದ ಸೋದರತೆಗೆ, ಸಾರ್ವಭೌಮತೆಗೆ ಮೋದಿಯವರು ಕಾರ್ಕೋಟಕ ವಿಷ. ಇವರು ವಿಶ್ವಗುರು ಅಲ್ಲ ವಿಷ ಗುರು ಸೇರಿದಂತೆ ಹಲವು ಬರಹಗಳ ಜೊತೆಗೆ ಮೋದಿಗೆ ಹೋಲುವ ಪೋಸ್ಟ್ ಹಾಕಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬರಹ ಬಿಜಪಿ ಕಾರ್ಯಕರ್ತರಿಗೆ ಬೇಸರವಾಗಿದೆ ಈ ಹಿನ್ನಲೆಯಲ್ಲಿ ಅಮಳ ರಾಮಚಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿ ಪುತ್ತೂರು ನಗರ ಪೋಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.