ಬೆಂಗಳೂರು: ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಿಜೆಪಿ ನಾಯಕರು ಸಿಟಿ ರೌಂಡ್ಸ್ ಮಾಡಿದ್ದಾರೆ. ಆದರೆ, ಕೇವಲ ಆಡಳಿತ ಪಕ್ಷದ ಕ್ಷೇತ್ರಗಳಿಗಷ್ಟೇ ವಿಸಿಟ್ ಮಾಡಿ ತಾರತಮ್ಯ ಮಾಡಿದ್ದಾರೆ. ಅಲ್ಲದೇ, ವಿರೋಧ ವ್ಯಕ್ತವಾಗಬಾರದು ಎಂಬ ನಿಟ್ಟಿನಲ್ಲಿ ಜಾಣ ನಡೆ ಪ್ರದರ್ಶಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಮ್ಮ ಪಕ್ಷದ ಶಾಸಕರ ಕ್ಷೇತ್ರಕ್ಕೆ ಬಿಜೆಪಿ ನಿಯೋಗ ಬಂದಿಲ್ಲ. ಸಾಯಿ ಲೇಔಟ್ ಭೈರತಿ ಬಸವರಾಜು ಪ್ರತಿನಿಧಿಸುವ ಕ್ಷೇತ್ರ. ಸಾಯಿ ಲೇಔಟ್ ಕಳೆದ ಮೂರು ದಿನಗಳಿಂದ ಸಂಪೂರ್ಣ ಜಲಾವೃತವಾಗಿದೆ. ಅಲ್ಲಿನ ಜನ ಮಳೆಯಿಂದಾಗಿ ಹೈರಾಣಾಗಿದ್ದಾರೆ. ಮನೆಗಳಿಗೆ ಸಂಪೂರ್ಣ ನೀರು ಹೊಕ್ಕು, ಇಡೀ ರಾಜ್ಯವೇ ಮಮ್ಮಲ ಮರಗುವಂತಹ ಘಟನೆಗಳು ಅಲ್ಲಿ ನಡೆದಿವೆ.
ಭೈರತಿ ಬಸವರಾಜ ಕಳೆದ 15 ವರ್ಷಗಳಿಂದ ಇಲ್ಲಿ ಶಾಸಕರಾಗಿದ್ದಾರೆ. ಆದರೂ ಬಿಜೆಪಿ ನಿಯೋಗ ವೀಕ್ಷಣೆಗೆ ಬಂದಿಲ್ಲ. ಕೇವಲ ರಸ್ತೆಗೆ ಬಂದು ರಾಜಕಾಲುವೆ ವೀಕ್ಷಣೆ ಮಾಡಿ ವಾಪಸ್ ಹೋಗಿದ್ದಾರೆ. ಸೌಜನ್ಯಕ್ಕೂ ಲೇಔಟ್ ನಿವಾಸಿಗಳನ್ನು ಬಿಜೆಪಿ ನಿಯೋಗ ಭೇಟಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.