ವಿಜಯಪುರ: ಬೆಲೆ ಏರಿಕೆ ಖಂಡಿಸಿ ರಾಜ್ಯ. ಸರ್ಕಾರದ ವಿರುದ್ಧ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ನಡೆಯುತ್ತಿದ್ದು, ನಾಳೆ ವಿಜಯಪುರದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ.
ಈ ಮೂಲಕ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಯತ್ನಾಳ್ ಕ್ಷೇತ್ರದಲ್ಲೇ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ. ಅಲ್ಲದೇ, ವಿಜಯಪುರದಲ್ಲಿ ಯತ್ನಾಳ್ ಇಲ್ಲದೇ ಬಿಜೆಪಿ ಅರಳಿಸಲು ಕಹಳೆ ಊದಲಾಗುತ್ತಿದೆ. ಯತ್ನಾಳ್ ವಿರೋಧಿ ಬಣ ಯಾತ್ರೆ ಯಶಸ್ಸುಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಸಭೆ ಕೂಡ ನಡೆದಿದೆ. ಸಭೆಯಲ್ಲಿ ಯತ್ನಾಳ್ ವಿರೋಧಿ ಬಣದ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಜನಾಕ್ರೋಶ ಯಾತ್ರೆ ಬೆಂಬಲಿಸಲು ಮನವಿ ಮಾಡಲಾಗಿದೆ. ಯತ್ನಾಳ ಕ್ಷೇತ್ರದಲ್ಲೇ ಯಾತ್ರೆ ನಡೆಸಿ ಸಕ್ಸಸ್ ಮಾಡಿ ಶಕ್ತಿ ತೋರಿಸೋಣ. ನಗರದಲ್ಲೇ ಯತ್ನಾಳ ಶಕ್ತಿ ಏನಿಲ್ಲ ಎಂಬುವುದನ್ನು ಕೇಂದ್ರ ನಾಯಕರಿಗೆ ತೋರಿಸೋಣ. ಈ ಮೂಲಕ ಯತ್ನಾಳ್ ಕೈಯಲ್ಲಿ ನಾಯಕತ್ವ ಇಲ್ಲ ಎಂಬುವುದನ್ನು ಸಾಬೀತು ಮಾಡೋಣ ಎಂದು ಕಾರ್ಯಕರ್ತರಿಗೆ ನಾಯಕರು ಕಿವಿ ಮಾತು ಹೇಳಿದ್ದಾರೆ.