ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ 150 ಕೋಟಿ ರೂ. ಆಮಿಷವೊಡ್ಡಿದ ಆರೋಪ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.
ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಬಯಲಾಗಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಮನುವಿ ಮಾಡಿದ್ದರು.
ಸದ್ಯ ಈ ವಿಷಯವಾಗಿ ಮಾಣಿಪ್ಪಾಡಿ ಮಾತನಾಡಿದ್ದು, ಸಿಎಂ ಹೇಳಿದ್ದು ಸುಳ್ಳು. ವಿಜಯೇಂದ್ರ ನನಗೆ ಯಾವುದೇ ಲಂಚದ ಅಮಿಷವೊಡ್ಡಿಲ್ಲ. 2012-13ರಲ್ಲಿ ನನಗೆ ವಿಜಯೇಂದ್ರ ಯಾರು ಎಂಬುವುದು ಗೊತ್ತಿರಲಿಲ್ಲ. ಆದರೆ, ಕಾಂಗ್ರೆಸ್ ನ ಹಲವರು ಲಂಚದ ಆರೋಪವೊಡ್ಡಿದ್ದು ನಿಜ. ವರದಿ ಜಾರಿ ಮಾಡುವ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದು ನಿಜ ಹಾಗೂ ಸಿಬಿಐ ತನಿಖೆಗೆ ಒತ್ತಾಯ ಮಾಡಿರುವುದು ಕೂಡ ನಿಜ. ಬಿಜೆಪಿಯಿಂದ ನನಗೆ ಯಾವುದೇ ಲಂಚದ ಅಮಿಷ ಬಂದಿಲ್ಲ. ಈ ಆರೋಪನ್ನು ಸಿಬಿಐಗೆ ವಹಿಸಿದೆ, ಕಾಂಗ್ರೆಸ್ ನವರ ಬುಡಕ್ಕೆ ಬರಲಿದೆ ಎಂದಿದ್ದಾರೆ.
ವರದಿಯ ಬಗ್ಗೆ ತನಿಖೆ ಮಾಡಿದರೆ ಹಲವರು ಜೈಲಿಗೆ ಹೋಗಬೇಕಾಗುತ್ತದೆ. ಅಲ್ಪಸಂಖ್ಯಾತರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರೀತಿ ಇದೆ. ಹೀಗಾಗಿ ನನ್ನ ವರದಿ ಕುರಿತು ಕ್ರಮ ಕೈಗೊಳ್ಳಲಿದೆ. ಎನ್.ಎ. ಹ್ಯಾರಿಸ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಏರ್ಪೋರ್ಟ್ ರಸ್ತೆಯಲ್ಲಿನ 24 ಎಕರೆ ಭೂಮಿಯನ್ನು ಹೆಂಡತಿ ಮತ್ತು ತಾಯಿಯ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಹಲವರ ಹೆಸರುಗಳಿವೆ ಎಂದಿದ್ದಾರೆ.