ಬೆಂಗಳೂರು: ಕಲಾಪದ ವೇಳೆ ಅಶಿಸ್ತು ತೋರಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯ 18 ಶಾಸಕರನ್ನು (BJP MLA’s Suspension) ಸ್ಪೀಕರ್ ಯು.ಟಿ. ಖಾದರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈಗ ಆ ಆದೇಶ ಹಿಂಪಡೆದಿದ್ದಾರೆ.
ಸ್ಪೀಕರ್ ಯುಟಿ ಖಾದರ್ (UT Khader) ನೇತೃತ್ವದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದಾರೆ. ಶಾಸಕರ ಅಮಾನತು ಹಿಂಪಡೆಯುವುದಕ್ಕಾಗಿ ಸ್ಪೀಕರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಸಿಎಂ, ವಿಪಕ್ಷ ನಾಯಕರು ಭಾಗಿಯಾಗಿದ್ದರು.
ಅಮಾನತುಗೊಂಡಿದ್ದ ಶಾಸಕರು
- ಅಶ್ವಥ್ ನಾರಾಯಣ, ಮಲ್ಲೇಶ್ವರ
- ಎಸ್.ಆರ್ ವಿಶ್ವನಾಥ್, ಯಲಹಂಕ
- ಮುನಿರತ್ನ, ಆರ್ಆರ್ ನಗರ
- ಬೈರತಿ ಬಸವರಾಜು, ಕೆಆರ್ ಪುರ
- ಸುರೇಶ್ ಗೌಡ, ತುಮಕೂರು ಗ್ರಾ.
- ಚನ್ನಬಸಪ್ಪ, ಶಿವಮೊಗ್ಗ
- ಸಿ.ಕೆ. ರಾಮಮೂರ್ತಿ, ಜಯನಗರ
- ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ
- ಬಿ.ಪಿ. ಹರೀಶ್, ಹರಿಹರ
- ಯಶ್ಪಾಲ್ ಸುವರ್ಣ, ಉಡುಪಿ
- ಭರತ್ ಶೆಟ್ಟಿ, ಮಂಗಳೂರು
- ಉಮಾನಾಥ್ ಕೋಟ್ಯಾನ್, ಮೂಡುಬಿದರೆ
- ಎಂ.ಆರ್ ಪಾಟೀಲ್, ಕುಂದಗೋಳ
- ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ
- ಶರಣು ಸಲಗಾರ್, ಬಸವಕಲ್ಯಾಣ
- ಬಸವರಾಜ ಮತ್ತಿಮೂಡ್, ಕಲಬುರಗಿ ಗ್ರಾಮಾಂತರ
- ಚಂದ್ರು ಲಮಾಣಿ, ಶಿರಹಟ್ಟಿ
- ದೊಡ್ಡನಗೌಡ ಪಾಟೀಲ್, ಕುಷ್ಟಗಿ