ಮಂಡ್ಯ : ಶಿಕ್ಷಕರ ಸಭೆಯಲ್ಲಿ ಶಿಕ್ಷಕರ ಬಣಗಳ ಕಿತ್ತಾಟ ನಡೆದಿರುವ ಘಟನೆ ನಡೆದಿದೆ.
ಶಿಕ್ಷಕರ ಈ ಬಣಬಡಿದಾಟ ಬಹಿರಂಗವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ನಿಂತಿತ್ತು. ನಗರದ ತಾವರೆಗೆರೆಯ ಎಸ್.ಬಿ.ಸಮುದಾಯದಲ್ಲಿ ನಡೆದ ಸಭೆಯಲ್ಲಿ ಈ ದುರ್ಘಟನೆ ನಡೆದಿದೆ. ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ಈ ಸಭೆಗೆ ಒಂದು ಗುಂಪಿನ ಬಣ ತಮ್ಮನ್ನು ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಗಲಾಟೆ ನಡೆಸಿತ್ತು. ಈ ಜಗಳದಿಂದಾಗಿ ಶಿಕ್ಷಕರ ಮರ್ಯಾದೆ ಹಾದಿ- ಬೀದಿಗೆ ಬಂದಂತಾಗಿತ್ತು. ಎರಡು ಬಣಗಳು ತಳ್ಳಾಟ, ನೂಕಾಟ ಹಾಗೂ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ಹೋಗಿದೆ. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.