ಬೆಂಗಳೂರು : ನಗರದ ಸೌತ್-ವೆಸ್ಟ್ ವಿಭಾಗ ಪೊಲೀಸರಿಂದ ಅಕ್ರಮವಾಗಿ ನೆಲೆಸಿದ್ದರೆಂದು ಶಂಕಿಸಲಾದ ಬಾಂಗ್ಲಾದೇಶಿ ಶೆಡ್ಗಳ ಮೇಲೆ ದಾಳಿ ನಡೆಸಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆಲವು ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.
ಮುತ್ತುರಾಜನಗರ, ಉಪಕಾರ್ ಲೇಔಟ್ ಹಾಗೂ ಮಾರುತಿ ನಗರ ಭಾಗಗಳಲ್ಲಿ ಗುರುತಿಸಲಾದ ಶೆಡ್ಗಳ ಮೇಲೆ ಪೊಲೀಸ್ ತಂಡಗಳು ಪರಿಶೀಲನೆ ನಡೆಸುತ್ತಿವೆ. ದಾಖಲೆಗಳ ಪರಿಶೀಲನೆ, ಗುರುತು ಪರಿಶೀಲನೆ ಹಾಗೂ ಕಾನೂನುಬದ್ಧ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ದಾಳಿ ಕಾರ್ಯಾಚರಣೆ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಪ್ರದೇಶದಲ್ಲಿ ಹೆಚ್ಚುವರಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ಗಮನಿಸಲಾಗುತ್ತಿದೆ.
ಇದನ್ನೂ ಓದಿ : ಹೋಳಿ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ತಯಾರಿ | 15 ಅಂಶಗಳ ಆದೇಶ ಬಿಡುಗಡೆ



















