ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಲಾರಿ ಸಮೇತ ಕೆರೆಗೆ ಉರುಳಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಎಂಬಲ್ಲಿ ನಡೆದಿದೆ.
ನಸುಕಿನ ಜಾವ ಲಾರಿ ಚಾಲಕ ಅತಿವೇಗವಾಗಿ ಬಂದಿದ್ದು, ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಡಿಕ್ಕಿಯೊಡೆದು ಕೆರೆಯಲ್ಲಿ ಲಾರಿ ಸಮೇತ ಸಂಪೂರ್ಣವಾಗಿ ಮುಳುಗಿರುವ ಶಂಕೆ ಇದೆ. ಇವನೊಂದಿಗೆ ಕ್ಲಿನರ್ ಇದ್ದು, ಅವನು ಜಲಸಮಾಧಿ ಆಗಿದ್ದಾನೆ ಎನ್ನಲಾಗಿದೆ.
ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ತಂಡ ಮತ್ತು ಈಜುಗಾರು ಭೇಟಿ ನೀಡಿದ್ದು, ಲಾರಿಯಲ್ಲಿದ್ದವರಿಗಾಗಿ ಶೋಧ ಕಾರ್ಯ ಮಾಡಲಾಗುತ್ತಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕೃಣ ದಾಖಲಾಗಿದೆ.
ಇದನ್ನೂ ಓದಿ : ಮುತ್ತೂಟ್ ಗ್ರೂಪ್ ನಿಂದ ವಿದ್ಯಾರ್ಥಿಗಳಿಗೆ 2.4 ಲಕ್ಷ ರೂಪಾಯಿ ಸ್ಕಾಲರ್ ಶಿಪ್ : ಹೀಗೆ ಅರ್ಜಿ ಸಲ್ಲಿಸಿ



















