ಐಪಿಎಲ್ ಚಾಂಪಿಯನ್ಸ್ ಗಳ ಸ್ವಾಗತಕ್ಕೆ ಬೆಂಗಳೂರು ಸರ್ವಸನ್ನದ್ಧವಾಗಿದೆ. ಅಹಮದಾಬಾದ್ ನಿಂದ ಬೆಂಗಳೂರಿಗೆ ಆಗಮಿಸಲಿರುವ ಆರ್ ಸಿಬಿ ಆಟಗಾರರಿಗೆ ಭವ್ಯ ಸ್ವಾಗತಕೋರಲಾಗುತ್ತಿದೆ. ನಗರದ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೂ ಅದ್ಧೂರಿ ವಿಜಯ ಯಾತ್ರೆ ಸಾಗಲಿದೆ.
ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಸೇರಿದಂತೆ ತಂಡದ ಆಟಗಾರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಹರ್ಷಘೋಷಗಳೊಟ್ಟಿಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ. ಈ ವಿಜಯ ಯಾತ್ರೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಒಡೆತನದ ಅಂಬಾರಿ ವಾಹನವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಅಷ್ಟಕ್ಕೂ ಈ ಅಂಬಾರಿ ವಾಹನ ಅರಮನೆಗಳ ನಗರಿ ಮೈಸೂರಿನ ಇತಿಹಾಸವನ್ನು ಪ್ರವಾಸಿಗರಿಗೆ ಉಣಬಡಿಸೋ ಕಾರ್ಯ ಮಾಡ್ತಿವೆ. 2021ರಲ್ಲಿ ಪ್ರವಾಸೋದ್ಯಮ ಇಲಾಖೆ ಖರೀದಿಸಿದ ಮೂರು ಬಸ್ ಗಳು ಮೈಸೂರಗೆ ಬರುವ ಪ್ರವಾಸಿಗರನ್ನು ನಗರದ ಪರಂಪರೆ ಪರಿಚಯಿಸೋ ಕಾರ್ಯ ಮಾಡುತ್ತಿವೆ.
ಈ ಬಸ್ ನಲ್ಲೇ ವಿಜಯಾತ್ರೆ ಸಾಗಲಿ ಅಂತಾ ಯೋಜಿಸಿರುವ ಆರ್ ಸಿಬಿ ಆಡಳಿತ ಮಂಡಳಿ ಸರ್ಕಾರಕ್ಕೆ ಬಸ್ ಒದಗಿಸುವಂತೆ ಮನವಿ ಮಾಡಿದೆ. ಈ ನಿಟ್ಟಿನಲ್ಲೇ ಈಗಾಗಲೇ ಮೈಸೂರಿನಿಂದ ಹೊರಟಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ ಬೆಂಗಳೂರು ತಲುಪಲಿದೆ. ಡಬಲ್ ಡೆಕ್ಕರ್ ತೆರೆದ ವಾಹನದಲ್ಲೇ ಇಂದು ರೆಡ್ ಆರ್ಮಿ ವಿಜಯಯಾತ್ರೆ ಸಾಗಲಿದೆ.