ಬಳ್ಳಾರಿ : ಬಳ್ಮಿಳಾರಿಯಲ್ಲಿ ಮಿಸ್ಸಿಂಗ್ ಫೈರಿಂಗ್ನಿಂದಾಗಿ ಮೃತಪಟ್ಟ ರಾಜಶೇಖರ ಮನೆಗೆ ಶಾಸಕ ನಾರಾ ಭರತ ರೆಡ್ಡಿ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.
ವಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತ ರಾಜಶೇಖರ ಶವ ಹುಸೇನ್ ನಗರದ ಅವರ ನಿವಾಸಕ್ಕೆ ಸಾಗಿಸಲಾಗಿದೆ. ಇದಾಗಲೇ ಅಂತ್ಯ ಸಂಸ್ಕಾರಕ್ಕೆ ಎಲ್ಲ ಸಿದ್ದತೆ ನಡೆದಿದೆ. ಭರತರೆಡ್ಡಿ ಜತೆ ಕಂಪ್ಲಿ ಶಾಸಕ ಜೆಎನ್ ಗಣೇಶ ಕೂಡ ಆಗಮಿಸಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳುದ್ದಾರೆ.
ಬಳಿಕ ಮಾತನಾಡಿದ ಭರತ್ ರೆಡ್ಡಿ FIR ದಾಖಲಾಗಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಾನು ಜಾಸ್ತಿ ಮಾತನಾಡಿ ಪ್ರಕರಣವನ್ನು ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಹುಡುಗ ತೀರಿಕೊಂಡಿದ್ದು, ನಾವೆಲ್ಲ ದುಃಖದಲ್ಲಿದ್ದೇವೆ. ನಾನು ಯಾರ ಬಗ್ಗೆಯೂ ಏನೂ ಮಾತನಾಡಲು ಹೋಗುವುದಿಲ್ಲ. ಯಾಕೆಂದರೆ ಅವರ ಮೈಂಡ್ಸೆಟ್, ಕ್ಯಾರೆಕ್ಟರ್ ಹೇಗೆ ಅಂತ ನಿಮಗೆಲ್ಲ ಗೊತ್ತು. ಇಡೀ ರಾಜ್ಯದ ಜನತೆಗೂ ಗೊತ್ತು. ನಾನೇನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎಂದರು.
ನಾಳೆ ನಮ್ಮ ವಾಲ್ಮೀಕಿ ಅಜ್ಜನ ಕಾರ್ಯಕ್ರಮವನ್ನು ಬಹಳ ಅದ್ಧೂರಿಯಾಗಿ ಮಾಡುತ್ತಿದ್ದೇವೆ. ಅಜ್ಜನ ಕಾರ್ಯಕ್ರಮ ನಿಲ್ಲಿಸಬೇಕೆಂದೇ ಹೀಗೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಜ್ಜನ ಕಾರ್ಯಕ್ರಮ ನಿಲ್ಲಬಾರದು. ಕಾರ್ಯಕ್ರಮ ನಿಲ್ಲಿಸಿದರೆ ತೀರಿಕೊಂಡ ಹುಡುಗನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ನಮ್ಮವರು, ಸ್ನೇಹಿತರು, ಹಿತೈಷಿಗಳು ಹೇಳಿದ್ದಾರೆ” ಎಂದು ತಿಳಿಸಿದರು.
ಜನಾರ್ಧನ ರೆಡ್ಡಿ ಜೀವನದಲ್ಲಿ ಯಾವತ್ತೂ ನಿಜ ಹೇಳಿದವನಲ್ಲ. ಇಂತಹ ಕೆಲಸಗಳನ್ನೇ ಮಾಡಿಕೊಂಡು ಬಂದವ. ಅವನು ಹೇಳಿದಕ್ಕೆಲ್ಲ ನಾನು ಉತ್ತರ ಕೊಟ್ಟುಕೊಂಡು ಹೋಗಲು ಆಗಲ್ಲ. ಜನಾರ್ದನ ರೆಡ್ಡಿ ಮನೆ ಮುಂದೆ ಯಾರೂ ಬ್ಯಾನರ್ ಹಾಕಿಲ್ಲ. ಅವನು ನೀಚ. ರಸ್ತೆಯಲ್ಲಿ ಬ್ಯಾನರ್ ಹಾಕಿದ್ದು, ಅದನ್ನು ನನ್ನ ಮನೆ ಮುಂದೆ ಹಾಕಿದ್ದಾರೆ ಎಂದು ಅವನೇ ಕ್ರಿಯೆಟ್ ಮಾಡಿದ್ದಾನೆ. ಒಬ್ಬ ಮಾಜಿ ಮಂತ್ರಿ, ಶಾಸಕ ಆಗಿದ್ದವನು ರಸ್ತೆಗೆ ಬಂದು ಈ ಕೆಲಸ ಮಾಡಿದ್ದಾನೆ” ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಸ್ವಿಗ್ಗಿ, ಝೊಮ್ಯಾಟೊ ಸಿಬ್ಬಂದಿಗೆ ಗುಡ್ ನ್ಯೂಸ್ | ವರ್ಷಕ್ಕೆ 90 ದಿನ ಕೆಲಸ ಮಾಡಿದರೆ ಸಿಗುತ್ತೆ ಸಾಮಾಜಿಕ ಭದ್ರತೆ!



















