ಕೊಪ್ಪಳ: ಮಾವಿನ ಹಣ್ಣು ತಿನ್ನುವುದಕ್ಕಾಗಿ ತೋಟಕ್ಕೆ ಕರಡಿಗಳು ನುಗ್ಗುತ್ತಿರುವ ಘಟನೆ ನಡೆದಿದೆ.
ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಈ ದೃಶ್ಯ ಕಂಡು ಬರುತ್ತಿದ್ದು, ಕರಡಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗಷ್ಟೇ ಅಕಾಲಿಕ ಮಳೆಯಿಂದಾಗಿ ಗಾಳಿ- ಮಳೆಗೆ ಮಾವಿನ ಕಾಯಿಗಳು ಉದುರಿ ಬಿದ್ದಿವೆ. ಹೀಗಾಗಿ ಕರಡಿಗಳು ಹಣ್ಣು ತಿನ್ನಲು ಬರುತ್ತಿವೆ.
ಸಾಣಾಪುರದ ಶರೀಫ ಎಂಬುವವರ ಹೊಲಕ್ಕೆ ಕರಡಿಗಳು ಬರುತ್ತಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಕರಡಿ ಆಗಮಿಸುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಜನ ಅಂಜುತ್ತಿದ್ದಾರೆ.