ಬಿಗ್ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಒಂದು ವಾರದಿಂದ ಸೈಲೆಂಟ್ ಆಗಿದ್ದಾರೆ. ಆದರೆ ಟಾಸ್ಕ್ ಚೆನ್ನಾಗಿ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್ನ ಉಸ್ತುವಾರಿ ಕೂಡ ನಿಭಾಯಿಸಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಅತಿಥಿಗಳಾಗಿ ಬಂದಿದ್ದರು. ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದರು. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ ಎಂದು ಹೇಳುವುದಾಗಿ ಚೈತ್ರಾ ಹೇಳಿದ್ದರು. ಮೊದಲಿಗೆ ಅಶ್ವಿನಿ ಒಪ್ಪಿರಲಿಲ್ಲ. ಆದರೆ ನಿನ್ನೆ ಚೈತ್ರಾ ಅವರ ಬಳಿ ಕ್ಷಮೆ ಕೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದರು. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಚೈತ್ರಾ ಕುಂದಾಪುರ ಬಿಬಿ ಪ್ಯಾಲೇಸ್ನ ಸಿಬ್ಬಂದಿಗಳಿಗೆ ಉತ್ತರವನ್ನು ಕೇಳುತ್ತಲೇ ಇದ್ದರು. ಕಾವ್ಯಗೂ ಕೇಳಿದಾಗ, “ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ” ಎಂದು ಹೇಳಿದರು.
ಅದನ್ನೇ ಪಾಯಿಂಟ್ ಔಟ್ ಮಾಡಿದ ಚೈತ್ರಾ, ಮನೆಯೊಳಗೆ ಇರುವ ಎಲ್ಲರೂ ಈ ಮಾತನ್ನು ರಿಪೀಟ್ ಮಾಡಬೇಕು. ಆಗಲೇ ತಿಂಡಿ ತಿನ್ನುವುದಾಗಿ ಹೇಳಿದರು.ಅಶ್ವಿನಿ ಗೌಡ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ನಾನು ಕ್ಷಮೆ ಕೇಳುತ್ತೇನೆ ವಿನಃ ಬುದ್ದಿ ಇಲ್ಲ ಎಂದೆಲ್ಲಾ ಹೇಳುವುದಿಲ್ಲ ಎಂದು ನೇರವಾಗಿ ಹೇಳಿದ್ದರು.
ಅಶ್ವಿನಿ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ಶುರುವಾಯಿತು. ಅಶ್ವಿನಿ ಗೌಡ, “ತಲೆಯಲ್ಲಿ ಬುದ್ದಿ ಇಲ್ಲ ಎಂದು ನೀವು ಬೇಕಾದರೆ ಕೇಳಿ, ನನ್ನ ಯಾರು ಕನ್ವಿನ್ಸ್ ಮಾಡೋದಕ್ಕೆ ಪ್ರಯತ್ನಪಡಬೇಡಿ” ಎಂದು ವಾರ್ನಿಂಗ್ ಕೊಟ್ಟರು.
ಆದರೆ, ಕಾವ್ಯ ಹಾಗೂ ಇನ್ನಿತರರು ಅಶ್ವಿನಿಯನ್ನು ಕನ್ವಿನ್ಸ್ ಮಾಡಲು ಮುಂದಾಗುತ್ತಲೇ ಇದ್ದರು. ಈ ಮೊದಲು ಬಂದ ಅತಿಥಿಗಳನ್ನು ಗಿಲ್ಲಿ ನಟ ಸಿಕ್ಕಾಪಟ್ಟೆ ಕಾಡಿದ್ದರು. ಆ ಬಳಿಕ ಅಶ್ವಿನಿ ಗೌಡ ಅವರು ಹಠ ಹಿಡಿದು ಕುಂತರು. “ನನಗೆ ಬುದ್ದಿ ಇಲ್ವಾ? ನಾನ್ಯಾಕೆ ಕೇಳಬೇಕು? ನಾನಿಲ್ಲಿ ವೆಯ್ಟರ್.. ಹಾಗಾದರೆ ನನಗೆ ಬೆಲೆ ಇಲ್ಲವೇ? ನನಗೆ ಈ ಥರ ಹೇಳುವುದಕ್ಕೆ ಇಷ್ಟವಿಲ್ಲ” ಎಂದು ಅಶ್ವಿನಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ : ಕೇಂದ್ರದ RITES ಸಂಸ್ಥೆಯಲ್ಲಿ 400 ಹುದ್ದೆಗಳ ನೇಮಕ : ಎಂಜಿನಿಯರಿಂಗ್ ಮುಗಿಸಿದವರಿಗೆ ಗುಡ್ ನ್ಯೂಸ್



















