ಬೆಂಗಳೂರು: ಗೋಬಿ, ಪಾನಿಪುರಿ, ಕಬಾಬ್ ಬ್ಯಾನ್ ಆಯ್ತು ಈಗ ಈ ಸರದಿ ಕರಿದ ಹಸಿರು ಬಟಾಣಿಗೆ ಬಂದು ನಿಂತಿದೆ. ಹೀಗಾಗಿ ಹಸಿರು ಬಟಾಣೆ ಪ್ರಿಯರಿಗೆ ಶಾಕ್ ಎದುರಾಗುತ್ತಿದೆ.
ಟೇಸ್ಟಿ ಹಸಿರು ಬಟಾಣಿ ಮೇಲೂ ನಿರ್ಭಂಧ ಹೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಟೈಮ್ ಪಾಸ್ ಗೆ ಅಂತ ತಿನ್ನುತ್ತಿದ್ದ ಕರಿದ ಹಸಿರು ಕಡಲೆಗೆ ರಿಸ್ಟ್ರಿಕ್ಷನ್ ಬೀಳುವ ಸಾಧ್ಯತೆ ದಟ್ಟವಾಗಿದೆ. ಹಸಿರು ಬಟಾಣಿಯಲ್ಲಿ ಯಥೇಚ್ಛವಾಗಿ ಕೃತಕ ಹಸಿರು ಬಣ್ಣ ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕಡಿಮೆ ದುಡ್ಡಿಗೆ ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಈ ಹಸಿರು ಬಟಾಣೆಯನ್ನು ಕೊಂಡು ತಿನ್ನುತ್ತಿದ್ದರು. ಆದರೆ, ಈ ಹಸಿರು ಬಟಾಣೆ ತಿಂದವರಲ್ಲಿ ಹೊಟ್ಟೆ ನೋವು ಕಾಣಿಸುತ್ತಿದೆ. ಈ ಪೈಕಿ ಬಹುತೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ 70 ಮಾದರಿಯ ಬಟಾಣೆಯನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯುತ್ತಿರುವ ಅಧಿಕಾರಿಗಳು, ಹಾನಿಕಾರಕ ಅಂಶ ಪತ್ತೆಯಾದರೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.