ಅಥಣಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ ಬೆನ್ನಲ್ಲಿಯೇ ಈಗ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರವಷ್ಟೇ ನಾನು ಪಕ್ಷದ ರಾಜ್ಯಾಧ್ಯಕ್ಷರನ್ನು ಒಪ್ಪಿಲ್ಲ ಒಪ್ಪುವುದಿಲ್ಲ ಎಂದು ಹೇಳಿದ್ದ ರಮೇಶ ಜಾರಕಿಹೊಳಿ, ಅಪ್ಪ ಮಕ್ಕಳ ಬ್ಲ್ಯಾಕ್ ಮೇಲ್ ಹೊರಗೆ ಬರಬೇಕಾದರೆ ಹೈಕಂಮಾಡಗೆ ಮನವಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ಪ ಮಕ್ಕಳ ಕಪಿ ಮುಷ್ಟಿಯಿಂದ ಬ್ಲ್ಯಾಕ ಮೇಲ್ ಹೊರಗೆ ಬರಬೇಕಾದರೆ ಹೈಕಮಾಂಡಿಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ಮನವಿ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೊಸ ಚುನಾವಣೆಗೆ ಅಣಿಯಾವುಗುವುದು ಉತ್ತಮ. ಸಿಎಂ ಸಿದ್ದರಾಮಯ್ಯ ಅವರ ಕಂಟ್ರೋಲ್ ತಪ್ಪಿದೆ. ಸಿಎಂ ಸಿದ್ದರಾಮಯ್ಯ ಸಿಡಿ ಶಿವುನಿಂದ ಕಂಟ್ರೋಲ್ ತಪ್ಪಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ನಾಯಕರು ಬಳ್ಳಾರಿ ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದ್ದರು. ಮುಡಾಗಿಂತಲೂ ದೊಡ್ಡ ಹಗರಣ ವಾಲ್ಮೀಕಿ ಹಗರಣವಿದೆ. ಮುಡಾ ಹಗರಣವನ್ನು ನ್ಯಾಯಾಂಗ ತನಿಖೆ ನಡೆಯುತ್ತಿದೆ. ಹೀಗಾಗಿ ವಾಲ್ಮೀಕಿ ಹಗರಣ ದೊಡ್ಡದಾಗಿದ್ದು ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು. ಪಾದಯಾತ್ರೆ ಮೈಸೂರಿಗೆ ಸೀಮಿತ ಮಾಡಬಾರದು. ವಾಲ್ಮೀಕಿ ಜನಾಂಗ ದೊಡ್ಡದಾಗಿದೆ. ಮುಸ್ಲಿಂ, ಲಿಂಗಾಯತ, ಎಸ್ಸಿ ಜನಾಂಗದ ಬಳಿಕ ವಾಲ್ಮೀಕಿ ಜನಾಂಗ ಬರುತ್ತದೆ. ಹೀಗಾಗಿ ಬಳ್ಳಾರಿ ಪಾದಯಾತ್ರೆ ಉತ್ತಮ ಎಂದು ಹೇಳಿದ್ದಾನೆ.
ನಾನು, ಯತ್ನಾಳ ಸೇರಿ ಇನ್ನಷ್ಟು ಶಾಸಕರು ಕೂಡಿ ಪಾದಯಾತ್ರೆ ಮಾಡುತ್ತೇವೆ. ಕೂಡಲಸಂಗಮದಿಂದ ಬಳ್ಳಾರಿ ವರೆಗೂ ವಾಲ್ಮೀಕಿ, ಎಸ್ಸಿ,ಎಸ್ಟಿ ಅನುದಾನ ಗ್ಯಾರಂಟಿ ಗೆ ಹಣ ಬಳಕೆ ಮಾಡ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಅನುಮತಿ ಕೇಳಿರುವೆ. ನಮಗೆ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿತ್ತು. ಈ ಹಗರಣ ನೋಡಿದ್ರೆ ನಮಗೆ ಬೇಜಾರಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಎಸ್ಸಿಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿರುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ಒತ್ತಡದಿಂದ ಹೊರಗೆ ಬಂದು ತನಿಖೆಗೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.