ಉಡುಪಿ: ಬುರ್ಕಾ ಧರಿಸಿ ಮಹಿಳೆಯರಿಬ್ಬರು ಮಗುವಿನ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದ್ದು, ಮಗುವಿನ ತಾಯಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಬೆಳಪು ಜನತಾ ಕಾಲನಿಯ ಮೊಹಮ್ಮದ್ ಆಲಿ ಎಂಬುವವರ ಮನೆಗೆ ಇಬ್ಬರು ಬುರ್ಕಾಧಾರಿಗಳು, ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಬಂದಿದ್ದಾರೆ.

ಈ ವೇಳೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೊರಗೆ ಓಡಿ ಹೋಗಲು ಪ್ರಯತ್ನ ಮಾಡಿದ್ದಾರೆ. ಮಗುವಿನ ತಾಯಿ ತಾಬುರಿಸ್ ಬೊಬ್ಬೆ ಹೊಡೆದಾಗ ಮಗುವನ್ನು ನೆಲದಲ್ಲಿ ಬಿಟ್ಟಿದ್ದಾರೆ. ತಡೆಯಲು ಬಂದ ತಾಬುರಿಸ್ ಗೆ ಚೂರಿಯಿಂದ ಗಾಯಗೊಳಿಸಿ ಪಾರಾಯಾಗಿದ್ದಾರೆ. ಮಹಿಳೆಯ ಬುರ್ಕಾ ಬೆಳಪು ರೈಲ್ವೇ ಹಳಿಯ ಬಳಿ ಪತ್ತೆಯಾಗಿದ್ದು, ಶಿರ್ವ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.