ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.
ಬೆಳ್ಳಂ ಬೆಳಗ್ಗೆ ಮನೆಯ ಬಳಿ ಬಂದ ಕಾಡಾನೆ ಕಂಡು ಜನರು ದಂಗಾಗಿ ಓಡಿ ಹೋಗಿದ್ದಾರೆ. ಮನೆಯೊಳಗೆ ನಿಂತವರ ಮೇಲೆಯೂ ಕಾಡಾನೆ ದಾಳಿ ನಡೆಸಲು ಯತ್ನಿಸಿದೆ. ಕಾಡಾನೆ ಕಂಡು ಮನೆಯವರು ಓಡಿ ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಬಾರದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬಾರದಹಳ್ಳಿ ಗ್ರಾಮದ ಯಶ್ವಂತ್ ಎಂಬುವವರ ಮನೆ ಬಳಿ ಕಾಡಾನೆ ಓಡಾಟ ನಡೆಸಿದೆ. ಗೋಣಿಬೀಡು ಹೋಬಳಿಯ ಸುತ್ತಮುತ್ತಲಿನ ಗ್ರಾಮದಲ್ಲಿ 42 ಕಾಡಾನೆಗಳ ಹಿಂಡು ಬೀಟುಬಿಟ್ಟಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಕಾಡಾನೆಗಳ ಸಂಚಾರದಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹಿಂಡು ಕಾಫಿತೋಟ, ರಸ್ತೆ, ಗ್ರಾಮಗಳಲ್ಲಿ ಸಂಚಾರ ಮಾಡುತ್ತಿವೆ. ಘಟ್ಟದಹಳ್ಳಿ, ಕೇಲ್ಲೂರು, ಮಾಕೋನಹಳ್ಳಿ, ಬಾರದಹಳ್ಳಿ, ಜಾಗರಮನೆ, ಚಂದ್ರಪುರ, ಕಮ್ಮರಗೋಡು ಗ್ರಾಮದಲ್ಲಿ ಸಂಚಾರ ಮಾಡುತ್ತಿದೆ. ಕಾಡಾನೆಗಳನ್ನು ಕಂಡು ಜನರು ಆತಂಕದಲ್ಲಿದ್ದಾರೆ.