ದಿನಗಳು ಉರುಳಿದಂತೆ ಕನ್ನಡದ ”ಬಿಗ್ ಬಾಸ್”ನ ಹನ್ನೆರಡನೇ ಸೀಸನ್ ರಂಗೇರುತ್ತಿದೆ. ಆರಂಭದಲ್ಲಿ ಸಪ್ಪೆ ಎಂಬ ಭಾವನೆ ಮೂಡಿಸಿದ್ದ ಈ ಕಾರ್ಯಕ್ರಮವನ್ನು ಈಗ ಒಂದು ವರ್ಗ ಜಾತಕ ಪಕ್ಷಿಯಂತೆ ಕಾದು ನೋಡುತ್ತಿದೆ.
ಬಿಗ್ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಇದುವರೆಗೆ ಅಗ್ರೆಸ್ಸಿವ್ ಆಟದ ವೈಖರಿಯಿಂದ ಬಿಗ್ಹೌಸ್ನಲ್ಲಿ ಹೆಸರು ಮಾಡಿದ್ದಾರೆ. ಇದೀಗ ಏಕಾಏಕಿ ಉಪವಾಸ ಸತ್ಯಾಗ್ರಹ ಕೈಗೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಯಾರ ಮೇಲಿನ ಕೋಪದಿಂದ ಅಶ್ವಿನಿ ತಮಗೆ ತಾವೇ ಈ ಕಠಿಣ ಶಿಕ್ಷೆ ಅನುಭವಿಸುತ್ತಿದ್ದಾರೆ..? ಊಟದ ಮೇಲ್ಯಾಕೆ ಕೋಪ..? ಎಂಬ ಹಲವು ಪ್ರಶ್ನೆಗಳು ಇದೀಗ ಶುರುವಾಗಿದೆ. ಇಂದು ಪ್ರಸಾರ ಆಗಬೇಕಿರುವ ಕಾರ್ಯಕ್ರಮದ ಪ್ರೋಮೋದಲ್ಲಿ ಅಶ್ವಿನಿ ಊಟ ಮಾಡದೆ ಅಳುತ್ತಾ ಮಲಗಿರುವ ದೃಶ್ಯ ಕಂಡುಬಂದಿದೆ.
ಕೆಲಸ ಮಾಡುವ ವಿಚಾರಕ್ಕೆ ಅಶ್ವಿನಿ ಕೋಪ ಮಾಡಿಕೊಂಡಂತಿದೆ. ಮನೆಯ ಕ್ಯಾಪ್ಟನ್ ರಘು ಕೆಲಸ ಮಾಡುವಂತೆ ಅಶ್ವಿನಿಗೆ ಹೇಳ್ತಾರೆ. ಆದರೆ, ಅಶ್ವಿನಿ ಆಗಲೇ ಹೊರಡದೆ ಹತ್ತು ನಿಮಿಷ ಸಮಯ ಕೊಡಿ ನನಗೆ ಬ್ಯಾಕ್ಪೇನ್ ಇದೆ ಎಂದು ಬೀನ್ಬ್ಯಾಗ್ಗೆ ಒರಗಿ ಕಣ್ಣುಮುಚ್ಚುತ್ತಾರೆ. ಆದರೆ ಹತ್ತು ನಿಮಿಷದಲ್ಲಿ ಬ್ಯಾಕ್ಪೇನ್ ಕಮ್ಮಿ ಆಗುತ್ತಾ ಎಂದು ರಘು ಗೊಣಗಲಾರಂಭಿಸಿದಾಗ ಅಶ್ವಿನಿಗೆ ಕೋಪ ಬರುತ್ತೆ. ಇಬ್ಬರ ನಡುವೆ ಮಾತುಕತೆ ನಡೆಯುವ ವೇಳೆ, ‘ನೀನು’ ಎಂದು ಏಕವಚನ ಪ್ರಯೋಗ ಮಾಡ್ತಾರೆ ರಘು. ಅಲ್ಲಿಂದ ಅಶ್ವಿನಿಯ ಉಪವಾಸ ಸತ್ಯಾಗ್ರಹ ಚಳುವಳಿ ಶುರುವಾದಂತೆ ಕಾಣುತ್ತದೆ. ಊಟ ಬಿಟ್ಟು ಮಲಗುವ ಅಶ್ವಿನಿಗೆ ಜಾನ್ವಿ ಊಟದ ತಟ್ಟೆ ತಂದು ಊಟ ಮಾಡುವಂತೆ ಒತ್ತಾಯ ಮಾಡ್ತಾರೆ. ಆದರೂ ಊಟ ಬೇಡವೇ ಬೇಡ ಎಂದು ಅಶ್ವಿನಿ ಪಟ್ಟು ಹಿಡಿದು ಮಲಗುತ್ತಾರೆ.
ಹಿಂದೊಮ್ಮೆ ಇದೇ ಬಿಗ್ಬಾಸ್ನಲ್ಲಿ ಡ್ರೋನ್ ಪ್ರತಾಪ್ ಉಪವಾಸ ಸತ್ಯಾಗ್ರಹ ಮಾಡಿದ್ದರು. ಬಳಿಕ ಸುಸ್ತಾಗಿ ಆಸ್ಪತ್ರೆ ಸೇರಿದ್ದರು. ಇದೀಗ ಅಶ್ವಿನಿ ಎಷ್ಟು ದಿನವ ತಮ್ಮ ಹಠ ಮುಂದುವರೆಸುತ್ತಾರೆ..? ಯಾಕಾಗಿ ಈ ಕಟು ನಿರ್ಧಾರಕ್ಕೆ ಬಂದಿದ್ದಾರೆ ಎಲ್ಲವೂ ಕೆಲವೇ ಗಂಟೆಗಳಲ್ಲಿ ತಿಳಿಯಬೇಕಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್ | ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ



















