ಬಾಗಲಕೋಟೆ: ಪೆಟ್ರೋಲ್ ಪಂಪ್ ಕೆಲಸಗಾರರ ಮೇಲೆ ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮುಧೋಳ ನಗರದ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ. ಕೆಲಸಗಾರ ಮಹಾದೇವ ಯಲನಾಯಕ್, ಮ್ಯಾನೇಜರ್ ನಿಂಗಪ್ಪ ಹಲ್ಲೆಗೊಳಗಾದವರು. ಮಹಾಲಿಂಗಪುರ ರಸ್ತೆಯಲ್ಲಿರುವ ಜೈ ಮಲ್ಹಾರ್ ಹೆಚ್.ಪಿ. ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕುವುದು ತಡವಾಗಿದ್ದಕ್ಕೆ ವಾಗ್ವಾದ ನಡೆದಿದೆ.
ಈ ವೇಳೆ ಪುಂಡರ ಗುಂಪು, ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೊನ್ನೆ, ಬೆಲ್ಟ್ನಿಂದ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೇ. 2 ರಂದು ನಡೆದ ಘಟನೆ ತಡವಾಗಿ ಬೆಳೆಕಿಗೆ ಬಂದಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಆರೋಪಿಗಳನ್ನು ಶಮಶುದ್ದೀನ್ ಬೇಪಾರಿ(27),ಸಕ್ಲೈನ್ ಗಲಗಲಿ(22),ಮಕ್ತುಮ್ ಬೇಪಾರಿ(23), ಸೋಹೆಲ್ ಬೇಪಾರಿ(23) ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದ ಆರೋಪಿಗಳೆಲ್ಲರೂ ಮುಸ್ಲಿಂ ಸಮುದಾಯದವರಾಗಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಚರ್ಚೆಯಾಗುತ್ತಿದ್ದು, ಕೋಮು ಸಂಘರ್ಷ ರೂಪ ಪಡೆದುಕೊಳ್ಳುವ ರೀತಿಯಲ್ಲಿ ಪೋಸ್ಟ್ ಗಳನ್ನು ಕಿಡಿಗೇಡಿಗಳು ಹಾಕುತ್ತಿದ್ದಾರೆ.