ರಾಮನಗರ : ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೂತನ ಟೌನ್ ಶಿಪ್ ನಿರ್ಮಾಣ ವಿಚಾರವಾಗಿ ಜಿಲ್ಲೆಯ ಬಿಡದಿ ಹೊಸೂರು ಗ್ರಾಮದಲ್ಲಿ ರೈತರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಬಿಡದಿ ಭಾಗದಲ್ಲಿ ನೂತನ ಟೌನ್ ಶಿಪ್ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ ಡಿಕೆಶಿ ಭೂಸ್ವಾಧೀನಕ್ಕೆ ರೈತರು ಒಪ್ಪಿದ್ದಾರೆಂಬ ಹೇಳಿಕೆ ನೀಡಿದ್ದರು. ಆ ವಿಚಾರವಾಗಿ ರೈತರು ಡಿಕೆಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಕನಕಪುರ ಭಾಗದಲ್ಲಿ ಬೇಕಾದರೆ ಟೌನ್ ಶಿಪ್ ಮಾಡಲಿ. ಅದನ್ನು ಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ಮೇ 8 ಕ್ಕೆ ಭೈರಮಂಗಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.