ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಇತಿಹಾಸ

ಅಂಗ ಸಂಗವ ಬಿಟ್ಟು, ಭವವ ಗೆದ್ದವಳು ಈ “ಅಕ್ಕ ಮಹಾದೇವಿ”

September 14, 2024
Share on WhatsappShare on FacebookShare on Twitter

ಹನ್ನೆರಡನೇ ಶತಮಾನದ ಶರಣ ಗಣ್ಯರ ನಡುವೆ, ತನ್ನ ಸರ್ವ ಸಂಘ ಪರಿತ್ಯಾಗ ಹಾಗೂ ಅಗಾಧವಾದ ಜ್ಞಾನದ ಮೂಲಕವೇ ಉನ್ನತ ಸ್ಥಾನಕ್ಕೇರಿದ ಶರಣೆ “ಅಕ್ಕಮಹಾದೇವಿ”. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಎಂಬಲ್ಲಿನ “ಉಡುತಡಿ” ಎಂಬ ಪುಟ್ಟ ಊರಲ್ಲಿ ಶಿವಭಕ್ತ ದಂಪತಿಗಳಿಗೆ ಜನಿಸಿದವಳು ಈ ಮಹಾದೇವಿ. ಬಾಲ್ಯದಿಂದಲೂ ಆಕೆ ಮಹಾದೇವನಲ್ಲೇ ಅನುರಕ್ತಳಾಗಿ ಭಕ್ತಿ ಪರವಶಳಾದವಳು. “ದೇವರ ದೇವ ಶ್ರೀ ‘ಚೆನ್ನಮಲ್ಲಿಕಾರ್ಜುನ’ನ್ನೇ ನಾನು ಪತಿಯಾಗಿ ಸ್ವೀಕರಿಸುವೆ” ಎಂಬ ಹಠಕ್ಕೆ ಬಿದ್ದವಳು ಈ ಬಾಲೆ ಮಹಾದೇವಿ. ಪ್ರಾಯಕ್ಕೆ ಬಂದಾಗಲೂ ಈಕೆಯ ನಿರ್ಧಾರ ಬದಲಾಗಲಿಲ್ಲ. ಮಾನವರಾರನ್ನೂ ನಾನು ಪತಿಯಾಗಿ ಸ್ವೀಕರಿಸುವುದಿಲ್ಲ ಎಂಬ ಮಾತಿಗೆ ಆಗಲೂ ಕಟೀಬದ್ಧಳಾಗೇ ಇದ್ದಳು. ನೋಡುಗ,ಕೇಳುಗರಿಗೆ ಈ ಆಲೋಚನೆ ಪರಮಾವಧಿ ಅನಿಸಿದರೂ, ಮಹಾದೇವಿ ತನ್ನೊಳಗಿನ ಶಕ್ತಿ ಬಲ್ಲವಳಾಗಿಯೋ ಏನೋ, ದೃಢ ಚಿತ್ತದಿಂದಲೇ ನಿರ್ಧರಿಸಿದಂತಿದ್ದಳು.
ಅರಸರ ಕಾಲವಾದ್ದರಿಂದ, ಆಗಿನ್ನೂ ಪ್ರಾಯದಲ್ಲಿ ಪಳ-ಪಳಿಸುತ್ತಾ, ಅರಳಿ ಆಕರ್ಷಿಸುವ ಹೂವಿನಂತೆ ಮನಸೋರೆಗೊಳ್ಳುವಂತೆ ಬೆಳೆದು ನಿಂತ ಮಹಾದೇವಿಯು, ಸಹಜವಾಗಿಯೇ ರಾಜ “ಕೌಶಿಕ”ರ ಕಣ್ಣಿಗೆ ಬೀಳುತ್ತಾಳೆ. ಈಕೆಯ ರೂಪ ರಾಶಿಗೆ ಆಕರ್ಷಿತರಾಗುವ ಕೌಶಿಕ ರಾಜ ತಾನು ಮಹಾದೇವಿಯನ್ನು ಪತ್ನಿಯಾಗಿಸಿಕೊಳ್ಳುವ ಮಾತಾಡುತ್ತಾನೆ. ಇತ್ತ ಚೆನ್ನಮಲ್ಲಿಕಾರ್ಜುನ (ಹರ)ನನ್ನೇ ವರಿಸುವೆನೆಂದು ಪರಿತಪಿಸುತ್ತಾ ಕುಳಿತ ಮಹಾದೇವಿ, ತಾನು ರಾಜರ ಆಯ್ಕೆಯನ್ನು ತಿರಸ್ಕರಿಸುತ್ತಾಳೆ. ಆಗಿನ ಕಾಲಕ್ಕೆ ಅದು ದ್ರೋಹದಂತೆಯೇ ಪರಿಗಣಿಸುವ ರಾಜರ ಆಡಳಿತ. ಈಕೆಯ ತಿಸ್ಕಾರಕ್ಕೆ ರಾಜ ಕೌಶಿಕ ತಿರುಗಿಬೀಳುತ್ತಾನೆ. ಮಹಾದೇವಿಯ ಮನೆ ಮಂದಿಗೆಲ್ಲಾ ಕಿರುಕುಳ ಕೊಡಲಾರಂಭಿಸುತ್ತಾನೆ. ದಿನೇ ದಿನೇ ರಾಜನ ಕಿರುಕುಳ ಅತಿಯಾಗುತ್ತಾ ಹೋಗಿ ಮನೆಯವರು ನಲುಗುತ್ತಾರೆ. “ತನ್ನಿಂದ ಮನೆಯವರೆಲ್ಲಾ ಶಿಕ್ಷೆ ಅನುಭವಿಸುವಂತಾಗಬಾರದು” ಎಂಬ ಆಲೋಚನೆಯಲ್ಲಿ ರಾಜನನ್ನು ಮದುವೆಯಾಗಲು ಒಲ್ಲದ ಮನಸ್ಸಲ್ಲಿಯೇ ಒಪ್ಪುತ್ತಾಳೆ ಮಹಾದೇವಿ. ಆದರೆ, ಅದಕ್ಕೊಂದಷ್ಟು ನಿಬಂಧನೆ ಹಾಕಿ, ತಪ್ಪಿ ನಡೆದರೆ ಅಥವ ನಿಬಂಧನೆ ಮೀರಿ ನಿಂತರೆ, ಅಂದಿಗೆ ಸಂಸಾರ ಬಂಧನದಿಂದ ಮುಕ್ತಿ ಪಡೆಯುವುದಾಗಿ ತಿಳಿಸುತ್ತಾಳೆ. ಕೊನೆಗೆ ಈ ಒಪ್ಪಂದದೊಂದಿಗೆ ಶಿವ ಭಕ್ತನಲ್ಲದ ರಾಜ ಕೌಶಿಕನನ್ನು “ವಿಧಿ ಲಿಖಿತ” ಎನ್ನುತ್ತಾ ಮದುವೆಯಾಗುತ್ತಾಳೆ.
ಮೊದ-ಮೊದಲು ಸರಿಯಿರುವ ರಾಜ, ದಿನ ಕಳೆದಂತೆ ಮಹಾದೇವಿಗೆ ತಾನು ಕೊಟ್ಟ ಮಾತು ಮರೆತು ನಿಬಂಧನೆ ಮೀರಿ ವರ್ತಿಸುತ್ತಾನೆ. ಮೊದಲೇ ಮಾತು ಕೊಟ್ಟಂತೆ ಮಹಾದೇವಿ ರಾಜನ ನಡೆಯಿಂದ ಬೇಸತ್ತು, ಆ ಊರನ್ನೇ ಬಿಟ್ಟು ಹೊರಟು ನಿಲ್ಲುತ್ತಾಳೆ. ಅಲ್ಲಿಂದ ತನ್ನಿಚ್ಚೆಯಂತೆ ಬದುಕಲು ಬಯಸಿದ ಮಹಾದೇವಿ “ಕಲ್ಯಾಣ ಪಟ್ಟಣ”ಕ್ಕೆ ಬಂದು ನೆಲೆಯಾಗುತ್ತಾಳೆ. ಆಕೆ ಬಯಸಿದಂತೆಯೇ ಆ ಊರಲ್ಲಿ “ಶಿವಾನುಭವ ಮಂಟಪ” ಕಂಡ ಮಹಾದೇವಿಗೆ ಆನಂದವೋ ಆನಂದ. ಶಿವನಲ್ಲಿ ಅನುರಕ್ತಳಾಗಿ ಬದುಕು ಸೆವೆಸಲು ಇದುವೇ ಸೂಕ್ತ ಸ್ಥಳ ಎಂದು ಪರಿಭಾವಿಸಿ, ಆ “ಅನುಭವ ಮಂಟಪ” ಸೇರಿಕೊಳ್ಳುತ್ತಾಳೆ. ಅಲ್ಲಿ ಮಹಾಜ್ಞಾನಿಗಳಾದ ಜಗಜ್ಯೋತಿ ಬಸವಣ್ಣ, ಅಲ್ಲಮ ಪ್ರಭುಗಳು, ಚೆನ್ನ ಬಸವಣ್ಣನವರು, ಸಿದ್ಧರಾಮನವರು, ಸೇರಿ ಶಿವಭಕ್ತ ಗಣವೇ ತುಂಬಿಕೊಂಡಿತ್ತು. ಅನುಭವ ಮಂಟಪ ಸೇರಿದ ಹೊಸತರಲ್ಲಿ, ವಯಸ್ಸಿನಲ್ಲಿ ಕಿರಿಯಳಾದ ಮಹಾದೇವಿಯನ್ನು ಶಿವ ಶರಣರು ಹಲವು ವಿಧಗಳಲ್ಲಿ ಪರೀಕ್ಷಿಸಿದರು. ಆದರೆ, ಅಂತರಾತ್ಮದಿಂದಲೇ ಪರಿಶುದ್ಧಳಾಗಿದ್ದ ಆಕೆ ಎಲ್ಲರ ಹುಬ್ಬೇರುವಂತೆ ಪರೀಕ್ಷೆಗೆ ಒಡ್ಡಿಕೊಂಡು ಗೆದ್ದು ಬಂದಳು. ಶ್ರೇಷ್ಠ ಶಿವ ಶರಣ “ಬಸವಣ್ಣ” ರನ್ನು ತನ್ನ ಗುರುವನ್ನಾಗಿ ಸ್ವೀಕರಿಸುವ ಮಹಾದೇವಿ, ಅಲ್ಲಿ ನೆರೆಯುತ್ತಿದ್ದ ಮಹಾನ್ ಜ್ಞಾನಿಗಳ, ಭಕ್ತ ಮಹಾಶಯರ ಜೊತೆ ಭಕ್ತಿಯ ಪರಾಕಾಷ್ಠೆ ತಲುಪಿದಳು. ಆಧ್ಯಾತ್ಮದ ಅತ್ಯುನ್ನತಿ ಪಡೆವ ಮಹಾದೇವಿ ಚೆನ್ನಮಲ್ಲಿಕಾರ್ಜು (ಶಿವ)ನ ಕೂಡಿಕೊಳ್ಳಲು ತನ್ನ ಬದುಕಿನ ಸಾರ್ಥಕತೆ ಪಡೆಯಲು, ಶ್ರೀಶೈಲದ ಕಡೆ ಹೊರಟು ನಿಂತಳು. ಮಹಾದೇವಿಯಾಗಿ ಅನುಭವ ಮಂಟಪ ಸೇರಿದ್ದವಳು, ಶ್ರೀ ಶೈಲಕ್ಕೆ ಹೊರಟು ನಿಲ್ಲುವ ಹೊತ್ತಿಗೆ “ಅಕ್ಕ ಮಹಾದೇವಿ” ಎಂದು ಕರೆಸಿಕೋಳೊಳ್ಳುವಷ್ಟು ಭಕ್ತಿಧಾರೆ, ಜ್ಞಾನ ಸುಧೆ ಹರಿಸಿದ್ದಳು ಈಕೆ. ಸಾಲಿಗ್ರಾಮ ಶಿಲೆಯಂತೆ ಸೆವೆಸಿದ ಬದಕು ಮುಗಿಸಿಕೊಂಡು, ಮಹಾದೇವ ಚನ್ನಮಲ್ಲಿಕಾರ್ಜುನನಲ್ಲಿ ಲೀನಳಾಗಲು ಹೊರಟು ನಿಂತಳು. ಕಾಡು-ಮೇಡು ಅಲೆಯುತ್ತಾ ಶಿವೈಕ್ಯಕ್ಕೆ ದಾರಿ ಕಂಡಳು. ಕೊನೆಗೆ ಆಕೆ ಬಯಸಿದಂತೆಯೇ ಚನ್ನಮಲ್ಲಿಕಾರ್ಜುನನ ಜೊತೆ ಲೀನಳಾಗ ಬಯಸಿ ಇಹಲೋಕ ತ್ಯೇಜಿದಳು.
ಈ ದೇಶ ಕಂಡ ಮೊದಲ ವಚನಗಾರ್ತಿಯಾಗಿ ಅಕ್ಕ ಮಹಾದೇವಿ ಎಂದೆಂದಿಗೂ ಅಜರಾಮರ. ಅನುಭವ ಮಂಟಪದಲ್ಲಿದ್ದ ಮಹಾನ್ ಭಕ್ತಿ ಭಂಡಾರಿಗಳಿಂದಲೇ “ಅಕ್ಕ” ಎಂದು ಕರೆಸಿಕೊಂಡವಳು, ಅಂದುಕೊಂಡಂತೆಯೇ ಬದುಕಿ ನಡೆದವಳು, ಅದೇ ಹಾದಿಯಲ್ಲೇ ಮುಕ್ತಿ ಪಡೆದವಳು ಈ “ಅಕ್ಕ ಮಹಾದೇವಿ”. “ತನುವಿನೊಳಗಿದ್ದು, ತನುವ ಗೆದ್ದಳು. ಮನದೊಳಗಿದ್ದು, ಮನವ ಗೆದ್ದಳು. ವಿಷಯದೊಳಗಿದ್ದು, ವಿಷಯಂಗಳ ಗೆದ್ದಳು. ಅಂಗ ಸಂಗವ ತೊರೆದು ಭವವ ಗೆದ್ದಳು” ಎಂದು ಅನುಭವ ಮಂಟಪದ ಜ್ಞಾನಿ ಚನ್ನಬಸವಣ್ಣನವರು ಹೇಳಿದ್ದು ಈಕೆಯ ಕಟೀಬದ್ಧ ಬದುಕಿಗೆ ಕನ್ನಡಿ ಹಿಡಿದಂತಿದೆ.

SendShareTweet
Previous Post

ಮಹಿಳೆಯರ ಬಗ್ಗೆ ಹಗುರ ಮಾತು; ಶಾಮನೂರು ವಿರುದ್ಧ ಸೈನಾ ಆಕ್ರೋಶ!

Next Post

ಮರದಿಂದ ಕೆಳಗೆ ಬಿದ್ದು ಬಿಎಂಟಿಸಿ ಚಾಲಕ ಸಾವು!

Related Posts

ಸಾಹಿತ್ಯದ ಮೂಲಕ ಸಮಾಜ ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿಎಂ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಸಾಹಿತ್ಯದ ಮೂಲಕ ಸಮಾಜ ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿಎಂ

ಕನ್ನಡದ ಜನಪ್ರಿಯ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಕನ್ನಡದ ಜನಪ್ರಿಯ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ

ಮರೆಯಾದ ಕನ್ನಡ ರತ್ನ-ನಾಡ ಬಾವುಟ ಹಿಂದಿನ ಶಕ್ತಿ ಕಣ್ಮರೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಮರೆಯಾದ ಕನ್ನಡ ರತ್ನ-ನಾಡ ಬಾವುಟ ಹಿಂದಿನ ಶಕ್ತಿ ಕಣ್ಮರೆ

ಸಾಹಿತಿ ಬಾನು ಮುಷ್ತಾಕ್ ಗೆ ಒಲಿದು ಬಂದ ಬೂಕರ್ ಪ್ರಶಸ್ತಿ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಸಾಹಿತಿ ಬಾನು ಮುಷ್ತಾಕ್ ಗೆ ಒಲಿದು ಬಂದ ಬೂಕರ್ ಪ್ರಶಸ್ತಿ

ಹೋಟೆಲ್ ಸಿಬ್ಬಂದಿ ಕೈಗೆ ಕಾರಿನ ಬೀಗ ಕೊಡುವ ಮುನ್ನ ಹುಷಾರ್
ಇತಿಹಾಸ

ಹೋಟೆಲ್ ಸಿಬ್ಬಂದಿ ಕೈಗೆ ಕಾರಿನ ಬೀಗ ಕೊಡುವ ಮುನ್ನ ಹುಷಾರ್

ಈ ಯುವತಿಯನ್ನು ಮದುವೆ ಆಗೋಕೆ ನಿಮ್ಮಲ್ಲಿ ಇರಬೇಕು ಈ ಕ್ವಾಲಿಟೀಸ್! ಅಬ್ಬಬ್ಬಾ.. ಡಿಮ್ಯಾಂಡ್‌ ನೋಡಿ!
ಇತರೆ ಸುದ್ದಿ

ಈ ಯುವತಿಯನ್ನು ಮದುವೆ ಆಗೋಕೆ ನಿಮ್ಮಲ್ಲಿ ಇರಬೇಕು ಈ ಕ್ವಾಲಿಟೀಸ್! ಅಬ್ಬಬ್ಬಾ.. ಡಿಮ್ಯಾಂಡ್‌ ನೋಡಿ!

Next Post
ಮರದಿಂದ ಕೆಳಗೆ ಬಿದ್ದು ಬಿಎಂಟಿಸಿ ಚಾಲಕ ಸಾವು!

ಮರದಿಂದ ಕೆಳಗೆ ಬಿದ್ದು ಬಿಎಂಟಿಸಿ ಚಾಲಕ ಸಾವು!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಗಿಡ-ಮರ ಹಾಳು; ವಾಕರ್ಸ್‌ ದೂರು!

ಗಿಡ-ಮರ ಹಾಳು; ವಾಕರ್ಸ್‌ ದೂರು!

ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ವರ್ಷ; ಸರ್ಕಾರಕ್ಕೆ ತಂದೆಯ ಮನವಿಯೇನು?

ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ವರ್ಷ; ಸರ್ಕಾರಕ್ಕೆ ತಂದೆಯ ಮನವಿಯೇನು?

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಯಕನ ಬಂಧನ ಖಂಡಿಸಿ ಸ್ವಯಂದಹನಕ್ಕೆ ಮುಂದಾದ ಪ್ರತಿಭಟನಾಕಾರರು, ಕರ್ಫ್ಯೂ ಜಾರಿ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಯಕನ ಬಂಧನ ಖಂಡಿಸಿ ಸ್ವಯಂದಹನಕ್ಕೆ ಮುಂದಾದ ಪ್ರತಿಭಟನಾಕಾರರು, ಕರ್ಫ್ಯೂ ಜಾರಿ

Recent News

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಗಿಡ-ಮರ ಹಾಳು; ವಾಕರ್ಸ್‌ ದೂರು!

ಗಿಡ-ಮರ ಹಾಳು; ವಾಕರ್ಸ್‌ ದೂರು!

ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ವರ್ಷ; ಸರ್ಕಾರಕ್ಕೆ ತಂದೆಯ ಮನವಿಯೇನು?

ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ವರ್ಷ; ಸರ್ಕಾರಕ್ಕೆ ತಂದೆಯ ಮನವಿಯೇನು?

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಯಕನ ಬಂಧನ ಖಂಡಿಸಿ ಸ್ವಯಂದಹನಕ್ಕೆ ಮುಂದಾದ ಪ್ರತಿಭಟನಾಕಾರರು, ಕರ್ಫ್ಯೂ ಜಾರಿ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ನಾಯಕನ ಬಂಧನ ಖಂಡಿಸಿ ಸ್ವಯಂದಹನಕ್ಕೆ ಮುಂದಾದ ಪ್ರತಿಭಟನಾಕಾರರು, ಕರ್ಫ್ಯೂ ಜಾರಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಆರ್ ಸಿಬಿ ಬಗ್ಗೆ ಲೇವಡಿ ಮಾಡಿದ ವಿಪಕ್ಷ ನಾಯಕ

ಗಿಡ-ಮರ ಹಾಳು; ವಾಕರ್ಸ್‌ ದೂರು!

ಗಿಡ-ಮರ ಹಾಳು; ವಾಕರ್ಸ್‌ ದೂರು!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat