ವಿಸ್ಮಯಗಳೇ ಹಾಗೆ, ಊಹೆಗೆ ನಿಲುಕುವುದಿಲ್ಲ. ವಿಜ್ಞಾನದ ವಾರೆಗಲ್ಲಿಗೆ ಹಚ್ಚಿದರೂ ಉತ್ತರ ಸಿಗುವುದಿಲ್ಲ. ಮೊಗೆದಷ್ಟೂ ಅಚ್ಚರಿಗಳ ಅಕ್ಷಯ ಪಾತ್ರೆಯೇ ಅಲ್ಲಿ ತೆರೆದುಕೊಳ್ಳುತ್ತದೆ. 21ನೇ ಶತಮಾನದಲ್ಲೂ ನಂಬಿಕೆ, ಶ್ರದ್ಧೆಯ ಆಚೆಗಿನ ಈ ಪ್ರಪಂಚ ಯಾರೊಬ್ಬರ ತರ್ಕಕ್ಕೂ ನಿಲುಕದ್ದು ಅನ್ನೋದು ಸತ್ಯ. ಅಂಥದ್ದೇ ಒಂದು ಅಪರೂಪದ, ಅತ್ಯಂತ ಶಕ್ತಿಶಾಲಿ ನೆಲೆಯೊಂದು ಕರ್ನಾಟಕದ ಮಗ್ಗುಲಲ್ಲೇ ಇದೆ ಅಂದ್ರೆ ನೀವು ನಂಬಲೇ ಬೇಕು. ಇದು ನಿಜಕ್ಕೂ ಅಂತಿಂಥಾ ಶಕ್ತಿ ಪೀಠವಲ್ಲ. ಖುದ್ದು ಶಿವನ ಪ್ರತಿಬಿಂಬವೇ ಇಲ್ಲಿ ನಿತ್ಯ ಗೋಚರಿಸುತ್ತೆ.
ಹೌದು! ಅದು ಬೇರಾವ ಪುಣ್ಯ ಕ್ಷೇತ್ರವಲ್ಲ. ಪರಶಿವನ ನೆಲೆ ಶ್ರೀಶೈಲಂ. ಶೀಶೈಲಂ. ಕರ್ನಾಟಕದ ಮಗ್ಗುಲಲ್ಲೇ ಇರುವ ಶ್ರೀಶೈಲಂ 12 ಜ್ಯೋತಿರ್ಲಿಂಗಳ ಪೈಕಿ ಒಂದು ಅನ್ನೋದು ವಿಶೇಷ. ಈ ಶ್ರೀಶೈಲದ ಒಡಲಲ್ಲಿ ಅದೆಷ್ಟೋ ನಿಗೂಢ ರಹಸ್ಯಗಳು ಅಡಗಿವೆ ಅನ್ನೋದು ಕೂಡ ನಿಜ. ಶತಮಾನಗಳಿಂದಲೂ ಈ ನಿಗೂಢ ಬೆಳವಣಿಗೆಗಳು ಇಲ್ಲಿ ನಡೆಯುತ್ತಲೇ ಬಂದಿವೆ. ಅಂಥಾ ಏಳು ವಿಸ್ಮಯಗಳನ್ನ ನಾವಿವತ್ತು ನಿಮ್ಮ ಮುಂದೆ ತೆರೆದಿಡುತ್ತಿದ್ದೀವಿ.

ಶ್ರೀಶೈಲದ ಶಿವಲಿಂಗ ಸೃಷ್ಟಿ ಹಿಂದಿನ ಸತ್ಯವೇ ಅದ್ಬುತ
ಅದು ನಲ್ಲಮಲ್ಲ ದಂಡಕಾರಣ್ಯ. ಅದರಲ್ಲೂ ಈ ಶ್ರೀಶೈಲ ಪವಿತ್ರ ಕ್ಷೇತ್ರ ಶಿವ ಮತ್ತು ಶಕ್ತಿಯ ಸಮಾಗಮ ಅನ್ನುವುದು ನಿಜಕ್ಕೂ ಹಲವರಿಗೆ ತಿಳಿಯದ ಸತ್ಯ. ಶಿವ ಮತ್ತು ಶಕ್ತಿಯ ಸಮ್ಮೇಳನವಾಗಿರುವ ಏಕೈಕ ಪವಿತ್ರ ನೆಲೆಯಂದ್ರೆ ಅದು ಶ್ರೀಶೈಲಂ. ಈ ಪುಣ್ಯ ಭೂಮಿಯ ಮೊದಲ ಅಚ್ಚರಿಯೆಂದರೆ, ಇಲ್ಲಿ ಪೂಜಿಸಲ್ಪಡುವ ಶಿವಲಿಂಗ ಉದ್ಭವವಾಗಿದೆ. ಇಲ್ಲಿನ ಆರಾಧ್ಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಲ್ಲ.ಬದಲಿಗೆ ತನ್ನಿಂದ ತಾನೇ ಉದ್ಭವಿಸಿದ ಸ್ವಯಂಭೂತಿ ಲಿಂಗ. ಶತಮಾನಗಳ ಹಿಂದೆ ನಲ್ಲಮಲ್ಲ ಅರಣ್ಯವನ್ನು ಚಂದ್ರವತಿ ಎಂಬ ರಾಣಿ ಆಳುತ್ತಿದ್ದಳು.ಆದರೆ, ಈ ರಾಣಿ ಆಸ್ಥಾನದಲ್ಲಿ ಅಚ್ಚರಿಯೊಂದು ಘಟಿಸಿತ್ತು. ನೂರಾರು ಹಸುಗಳು ಅರಮನೆಯಲ್ಲಿದ್ವು. ನಿತ್ಯವೂ ಕಾಡಿಗೆ ಹೋಗಿ ಬರುತ್ತಿದ್ದ ಹಸುಗಳಿಂದ ಅಲ್ಪ ಹಾಲು ಕೂಡಾ ಲಭ್ಯವಾಗುತ್ತಿರಲಿಲ್ಲ. ಈ ಬೆಳವಣಿಗೆ ರಾಣಿಯ ಗಮನಕ್ಕೆ ಬಂದದ್ದಲ್ಲದೆ, ಆತಂಕವನ್ನೂ ಹೆಚ್ಚಿಸಿತ್ತು.
ಇದರ ಬೆನ್ನುಬಿದ್ದ ರಾಣಿ ಚಂದ್ರವತಿ, ಒಮ್ಮೆ ಹಸುಗಳ ಬೆನ್ನಟ್ಟಿ ಕಾಡಿಗೆ ಹೋಗಿದ್ದಳು. ಅಷ್ಟೇ ಅಲ್ಲಿ ಕಂಡಿದ್ದು ನಿಜಕ್ಕೂ ವಿಸ್ಮಯ. ದಟ್ಟ ಕಾಡಿನ ಗರ್ಭದಲ್ಲಿ ಅವತರಿಸಿದ್ದ ದೊಡ್ಡ ಶಿವಲಿಂಗಕ್ಕೆ ಎಲ್ಲ ಹಸುಪಗಳು ಕ್ಷೀರಾಭಿಷೇಕ ನಡೆಸಿದ್ದವು. ಈ ಅಚ್ಚರಿ ಕಂಡ ರಾಣಿ ಅಲ್ಲೇ ಆರಾಧನೆಗೆ ಕೂತು ಬಿಟ್ಟಿದ್ದಳು. ಮುಂದೆ ಈ ರಾಣಿಯ ಸಾರಥ್ಯದಲ್ಲೇ ಶ್ರೀಶೈಲ ದೇಗುಲವೂ ನಿರ್ಮಾಣವಾಯಿತು. ಆದರೆ, ಇವತ್ತಿಗೂ ವಿಜ್ಞಾನ ಲೋಕಕ್ಕೂ ಈ ಶಿವಲಿಂಗ ಭೂಮಿಯ ಮೇಲೆ ಸ್ವಯಂ ಉದ್ಭವಿಸಿದ್ದು ಹೇಗೆ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.

ಶ್ರೀಶೈಲದ ಗರ್ಭಗುಡಿಯಲ್ಲಿದೆಯಾ ನಿಗೂಢ ಸುರಂಗ?
ಇನ್ನೂ ವಿಶೇಷ ಅಂದ್ರೆ ಶಿವನ ಆರಾಧನೆ ನಡೆಯುವ ಸ್ಥಳದಲ್ಲೇ ಮತ್ತೊಂದು ದೊಡ್ಡ ವಿಸ್ಮಯ ಅಡಗಿದೆ. ಅದು ನಿಜಕ್ಕೂ ಅಂತಿಂಥದ್ದಲ್ಲ. ಸಮಸ್ತ ಮನುಕುಲವೇ ದಂಗಾಗಿ ಹೋಗುವಂಥಾ ಸತ್ಯ.
ಹೌದು…ಶ್ರೀಶೈಲದ ಗರ್ಭಗುಡಿ ಅಡಿಯಲ್ಲೊಂದು ನಿಗೂಢ ಸುರಂಗ ಅಡಗಿದೆಯಂತೆ. ಅದು ಅಂತಿಂಥಾ ಸುರಂಗವಲ್ಲ. ಈ ಸುರಂಗ ನೇರ ಕೈಲಾಸ ಪರ್ವತಕ್ಕೆ ರಹದಾರಿಯಂತೆ. ಹಿಂದೆ ಶಿವನ ಕಟ್ಟರ್ ಆರಾಧಕರು ಈ ಸುರಂಗ ಮೂಲಕ ಕೈಲಾಸಕ್ಕೆ ಹೋಗುತ್ತಿದ್ದರಂತೆ. ಕಠೋರ ತಪಸ್ಸು, ಶಿವನನ್ನೇ ಆರಾಧಿಸಿ ಸಿದ್ಧಿಸಿಕೊಂಡ ಸಂತರು, ಇಲ್ಲಿನ ಅರ್ಚಕರು, ಅತಿಮಾನುಷ ಶಕ್ತಿಯುಳ್ಳ ಅಘೋರಿಗಳಿಗೂ, ಯೋಗಿಗಳಿಗಷ್ಟೇ ಈ ಸುರಂಗದ ಬಾಗಿಲು ತೆರೆಯುತ್ತಿತ್ತಂತೆ. ಅಷ್ಟೇ ಅಲ್ಲಾ ಇಂದಿಗೂ ಶಿವವನ್ನು ಮನಸ್ಸಿನಿಂದ ಆರಾಧಿಸಿ ದೇಗುಲದಲ್ಲಿ ಶಾಂತಚಿತ್ತರಾಗಿ ಕುಳಿತವರ ಕಣ್ಣ ಮುಂದೆ ಕೈಲಾಸ ಪರ್ವತ ಕಂಡ ಅನುಭವವೂ ಆಗಿದೆಯಂತೆ. ಹಾಗಂತ ಈ ಸುರಂಗದ ಗುಟ್ಟು ಇಂದಿಗೂ ತರ್ಕಕ್ಕೆ ನಿಲುಕದೆ ಉಳಿದಿರುವುದು ಸುಳ್ಳಲ್ಲ.
ಶಿವನ ಸನ್ನಿಧಿಯಲ್ಲಿದೆ ಮಾತನಾಡುವ ನಂದಿ!
ಶ್ರೀಶೈಲದ ಗರ್ಭಗುಡಿ ಮುಂದೆ ನಂದಿಯ ಸುತ್ತಲೂ ಆವರಿಸಿರುವುದೇ ಮೂರನೇ ವಿಸ್ಮಯ. ಶಾಂತ ಚಿತ್ತ ನಂದಿ ಮಾತನಾಡುವ ವಾಡಿಕೆಯಿದೆ. ಹೌದು ಶತಮಾನಗಳ ಹಿಂದೆ ಶಿವಾರಾಧಕರು ತಪಸ್ಸು ಮಾಡಿದರೆ, ಈ ನಂದಿ ಲೋಕಕಲ್ಯಾಣ ದಾರ್ಷನಿಕ ನುಡಿಗಳನ್ನು ಸಂತರ ಮುಂದೆ ನುಡಿದ ಪ್ರತೀತಿ ಇದೆ. ಇಂದಿಗೂ ನಂದಿಯನ್ನು ಆರಾಧಿಸಿದರೆ, ಸಾಕ್ಷಾತ್ ಅವತರಿಸಿ ಬಂದು ಮುಕ್ತಿ, ಮೋಕ್ಷ, ಭವಿಷ್ಯದ ನುಡಿಗಳನ್ನು ಉಲ್ಲೇಖಿಸಿರುವ ಉದಾಹರಣೆಗಳಿವೆ. ಈ ಅನುಭವವನ್ನು ಅದೆಷ್ಟೋ ಭಕ್ತರು ಅನುಭಿವಿಸಿದ್ದಕ್ಕೆ ಸಾಕ್ಷ್ಯಗಳಿವೆ.

ಶತಮಾನಗಳೇ ಉರುಳಿದ್ರು ನಂದಿಸಿದ ಜ್ಯೋತಿ!
ಶಿವನ ಸನ್ನಿಧಿಯಲ್ಲಿರುವ ಈ ಅಖಂಡ ಜ್ಯೋತಿ ತನ್ನೊಡಲಲ್ಲಿ ದೊಡ್ಡ ರಹಸ್ಯ ಅಡಗಿಸಿ ಕೂತಿದೆ. ಸಮಸ್ತ ಜಗತ್ತಿನ ಬೆಳಕಿನ ಪ್ರತೀಕವಾಗಿರುವ ಈ ಅಖಂಡ ಜ್ಯೋತಿ ಶತಮಾನಗಳಿಂದಲೂ ನಿತ್ಯ ಬೆಳಗುತ್ತಲೇ ಸಾಗಿದೆ. ಅಂದು ಆದಿ ಶಂಕರಾಚಾರ್ಯರು ಪ್ರಜ್ವಲಿಸಿದ ಈ ಜ್ಯೋತಿ ಇಂದಿಗೂ ನಿತ್ಯ ನಿಂರತರವಾಗಿ ಪ್ರಜ್ವಲಿಸುತ್ತಿದೆ. ಹಾಗಂತ ಈ ಜ್ಯೋತಿ ಬೆಳಗಲು ಬೇಕಿರುವ ಮೂಲ ಯಾವುದು ಅನ್ನೋದು ನಿಗೂಢ. ಯಾವುದೇ ತೈಲವಿಲ್ಲದೆ ಇಂದಿಗೂ ಈ ದೀಪ ಜಗಮಗಿಸುತ್ತಿರುವುದು ಹೇಗೆ ಅನ್ನೋದು ಅಚ್ಚರಿಯೇ ಸರಿ. ಪುರಾಣಗಳ ಪ್ರಕಾರ ಇದು ಸಮಸ್ತ ಜಗತ್ತಿನ ಇರುವಿಕೆಯ ಸಾಕ್ಷಾತ್ಕಾರ. ಖುದ್ದು ಶಿವನೇ ಹೊತ್ತಿಸಿದ ಜ್ಯೋತಿ ಮನುಕುಲದ ಅಸ್ತಂಗತದೊಂದಿಗೆ ಸಮಾಪ್ತಿಯಾಗುತ್ತೆ ಅನ್ನೋ ವಾಡಿಕೆ.
ಪಾತಾಳ ಗಂಗೆಯ ಅಸಲಿ ಕಹಾನಿ ಏನು?
ಶ್ರೀಶೈಲವನ್ನು ಪವಿತ್ರಗೊಳಿಸುವ ಅಮೃತವೆಂದ್ರೆ ಅದು ಕೃಷ್ಣೆ..ಈ ಕೃಷ್ಣೆ ಬೇರಾರು ಅಲ್ಲಾ ಶಿವನ ಅಂತರ ಗಂಗೆ..ಈ ಅಂತರ ಗಂಗೆ ವರ್ಷದಲ್ಲಿ ಒಮ್ಮೆ ಏಕಾಏಕಿ ನಾಪತ್ತೆಯಾಗಿಬಿಡುತ್ತೆ. ಹೌದು ಅಚ್ಚರಿಯಾದರೂ ಇದು ಸತ್ಯ. ಶಿವನ ಪಾದತಲದಲ್ಲಿ ಹರಿಯೋ ಕೃಷ್ಣೆ ಹೀಗೆ ಕಣ್ಮರೆಯಾಗೋ ಹಿಂದೆಯೂ ಒಂದು ದೊಡ್ಡ ಕತೆಯಿದೆ. ಒಂದು ಪವಿತ್ರ ದಿನದಂದು ಖುದ್ದು ಶಿವ ಮತ್ತು ಪಾರ್ವತಿ ಈ ಕೃಷ್ಣೆಯಲ್ಲೇ ಮಜ್ಜನ ಮಾಡ್ತಾರಂತೆ. ಆ ಕ್ಷಣ ಬೇರಾರ ಕಣ್ಣಿಗೂ ಕಾಣದಿರಲಿ ಎನ್ನುವಂತೆ ಮುನುಷ್ಯರಿಗೆ ಗೋಚರಿಸುವ ಕೃಷ್ಣೆ ಏಕಾಏಕಿ ಕಣ್ಮರೆಯಾಗ್ತಾಳೆ. ಹಾಗಂತಾ ಹೀಗೆ ಕಣ್ಮರೆಯಾಗೋ ಕೃಷ್ಣೆ ಕೆಲ ಕಾಲದ ನಂತ್ರ ಮತ್ತೆ ಬೋರ್ಘರೆಯುತ್ತಾಳೆ. ಹೀಗೆ ನಾಪತ್ತೆಯಾದ ನದಿ ಹೋಗಿದ್ದೆಲ್ಲಿಗೆ…ಮತ್ತೆ ಪ್ರತ್ಯಕ್ಷವಾಗಿದ್ದು ಹೇಗೆ ಇದಕ್ಕೆಲ್ಲಾ ಇಂದಿಗೂ ಉತ್ತರಗಳಿಲ್ಲ.

ಶಿವ ಲಿಂಗದ ಬಣ್ಣ ಪ್ರತಿ ನಿತ್ಯ ಬದಲು
ನಿತ್ಯ ಆರಾಧನೆಗೊಳಪಡುವ ಶಿವಲಿಂಗ ಇಲ್ಲಿ ನಿತ್ಯವೂ ಜಗವನ್ನು ಬೆಳಗುತ್ತಾನೆ ಎಂಬ ಪ್ರತೀತಿ ಇದೆ. ಹೀಗೆ ಸಮಸ್ತ ಜಗಬೆಳಗುವ ಪರಮಾತ್ಮನ ಆತ್ಮಲಿಂಗ ಮೂರು ಬಣ್ಣಗಳಿಗೆ ಬದಲಾಗುತ್ತೆ. ಮುಂಜಾನೆ ಶುಭ್ರ ಬಿಳಿ, ಮಧ್ಯಾಹ್ನ ಕೆಂಪು ಮತ್ತು ರಾತ್ರಿ ವೇಳೆಗೆ ಕಡು ಕಪ್ಪು ಬಣ್ಣದಲ್ಲಿ ಪ್ರಜ್ವಲಿಸುತ್ತಾನೆ. ಹಾಗಂತಾ ಈ ದೇಗುಲದ ವಾತಾವರಣ ಈ ನೆರಳು ಬೆಳಕಿನಾಟಕ್ಕೆ ಕಾರಣ ಎನ್ನಲಾಗುತ್ತಿದ್ದರೂ ಖುದ್ದು ವಿಜ್ಞಾನಿಗಳೇ ಇದು ಅದನ್ನು ಮೀರಿದ ಶಕ್ತಿಯ ಆಟ ಅಂತಾ ಬಿಂಬಿಸಿದ್ದಾರೆ.
ಮುಖಮಂಟಪದ ಗುಟ್ಟು ರಟ್ಟಾದ್ರೆ ಸಾಕ್ಷಾತ್ಕಾರವಾ?
ಅಷ್ಟಕ್ಕೂ ಶ್ರೀಶೈಲದ ಮುಖಮಂಟಪ ವಿಶ್ವದ ನೂರಾರು ವಿಜ್ಞಾನಿಗಳಿಗೆ ಲಕ್ಷಾಂತರ ಸವಾಲುಗಳನ್ನು ಒಡ್ಡಿ ನಿಂತ ಅಂಗಳ. ಹೌದು..ಈ ಮುಖಮಂಟಪದಲ್ಲಿರುವ ಕಂಬಗಳ ಮೇಲೆ ಬಗೆಹರಿಯದ ನೂರಾರು ಗಟ್ಟುಗಳು ಅಡಗಿವೆ. ಈ ಕಂಬಗಳ ಮೇಲಿನ ಕೆತ್ತನೆ ನಿಜಕ್ಕೂ ಹಲವು ಸತ್ಯಗಳ ಉತ್ತರಕ್ಕೆ ಕೀಲಿಕೈ. ಅಚ್ಚರಿಯಾದರೂ ಇದು ಸತ್ಯ. ಈ ಕಂಬಗಳ ಮೇಲಿನ ಕೆತ್ತನೆಗಳು ಬಾಹ್ಯಾಕಾಶದ ನಿಗೂಢಗಳ ಕೈಗನ್ನಡಿಯಾ. ಪಕ್ಕಾ ಕ್ಯೂಬ್ ನಂತಿರುವ ಇದನ್ನು ಇತ್ಯರ್ಥಗೊಳಿಸಿದ್ರೆ ಟ್ರೈಂ ಟ್ರಾವಲ್ ಮಾಡಬಹುದಾ. ಹಿಂದಾಗಿದ್ದು, ಮುಂದಾಗಬಹುದಾದದ್ದು ಎಲ್ಲವಕ್ಕೂ ಇಲ್ಲಿ ಉತ್ತರವಿದೆಯಾ. ಶತಮಾನಗಳಿಂದ ಈ ಕಂಬಗಳಲ್ಲಿ ಅಡಗಿರುವ ಸತ್ಯವನ್ನು ಶೋಧಿಸಸಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಇದಕ್ಕಿನ್ನೂ ಫಲ ಸಿಕ್ಕಿಲ್ಲ. ಟೆಲಿಸ್ಕೋಪಿಕ್ ಮಾದರಿಯ ಕೆಲ ಚಿತ್ರಗಳು ಹೇಳ ಹೊರಟಿರುವುದೇನು ಎನ್ನುವುದು ನಿಗೂಢ. ಒಟ್ಟಿನಲ್ಲಿ ಶಿವ ಮತ್ತು ಶಕ್ತಿಯ ಸಮಾಗಮದ ಸುಕ್ಷೇತ್ರ ಕೋಟ್ಯಾನು ಕೋಟಿ ನಿಗೂಢ ರಹಸ್ಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವುದು ಸುಳ್ಳಲ್ಲ.