ಮೈಸೂರು: ಅಂಬೇಡ್ಕರ್ ಭಾವಚಿತ್ರವನ್ನು ಹರಿದುಹಾಕಿ ಅಪಮಾನ ಮಾಡಿರುವ ಘಟನೆ, ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಈ ಹಿಂದೆಯೂ ಕೂಡ ಹಲ್ಲರೆ ಗ್ರಾಮದಲ್ಲಿ ಇಂತದ್ದೇ ಘಟನೆ ನಡೆದು ದೊಡ್ಡ ಮಟ್ಟದ ಗಲಾಟೆಯಾಗಿ ಶಾಂತಿಯಾಗಿತ್ತು. ಇದೀಗ ಮತ್ತೆ ಕಿಡಿಗೇಡಿಗಳು ತಡರಾತ್ರಿ ವಿದ್ಯುತ್ ಇಲ್ಲದ ಸಂದರ್ಭ ನೋಡಿ ಅಂಬೇಡ್ಕರ್ ಭಾವಚಿತ್ರ ಹರಿದು, ವಿಕೃತಿ ಮೆರೆದಿದ್ದಾರೆ. ಘಟನೆ ಹಿನ್ನೆಲೆ ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ..