ನವದೆಹಲಿ: ಜಾರ್ಖಂಡ್ನ ಚತ್ರಾ ಜಿಲ್ಲೆಯಲ್ಲಿ ಸೋಮವಾರ 7 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಆಂಬುಲೆನ್ಸ್ ಪತನಗೊಂಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಾಹಿತಿ ನೀಡಿದೆ.
ವಿಮಾನದಲ್ಲಿ ಇಬ್ಬರು ಪೈಲಟ್ಗಳು, ಒಬ್ಬ ರೋಗಿ, ಇಬ್ಬರು ಸಹಾಯಕರು, ಒಬ್ಬ ವೈದ್ಯ ಮತ್ತು ಒಬ್ಬ ಪ್ಯಾರಾಮೆಡಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 7 ಜನರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಈ ‘ಬೀಚ್ಕ್ರಾಫ್ಟ್ ಸಿ90’ ವಿಮಾನವು, ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ಸಂಜೆ 7.11ಕ್ಕೆ ಟೇಕಾಫ್ ಆಗಿತ್ತು. “ವಿಮಾನವು ಕೋಲ್ಕತ್ತಾದ ಎಟಿಸಿ ಜೊತೆ ಸಂಪರ್ಕ ಸಾಧಿಸಿದ ನಂತರ, ಸುಮಾರು 7:34ರ ಸುಮಾರಿಗೆ ವಾರಣಾಸಿಯ ಆಗ್ನೇಯ ದಿಕ್ಕಿನಲ್ಲಿ 100 ನಾಟಿಕಲ್ ಮೈಲಿ ದೂರದಲ್ಲಿ ರಾಡಾರ್ ಮತ್ತು ಸಂವಹನ ಸಂಪರ್ಕವನ್ನು ಕಳೆದುಕೊಂಡಿತು,” ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಜಿಲ್ಲಾ ಆಡಳಿತದ ಶೋಧ ಮತ್ತು ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ತಲುಪಿದೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಸಲು ವಿಮಾನ ಅಪಘಾತ ತನಿಖಾ ದಳದ (ಎಎಐಬಿ) ತಂಡವನ್ನು ಸ್ಥಳಕ್ಕೆ ರವಾನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಇದನ್ನೂ ಓದಿ : ಮೋದಿಗೆ ಬೈಯ್ಯುವವರಿಗೆ ಹೊದಿಕೆ ಇಲ್ಲ | ಮುಸ್ಲಿಂ ಮಹಿಳೆಯರಿಗೆ ಸಹಾಯ ನಿರಾಕರಿಸಿದ ಬಿಜೆಪಿ ಮಾಜಿ ಸಂಸದ



















