ರಾಜ್ಯ ರಾಜಕಾರಣದಲ್ಲಿ ಅಹಿಂದ ಅಸ್ತ್ರದ ಅಬ್ಬರ ಜೋರಾಗಿದೆ. ಹೀಗಾಗಿ ಜಾತಿ ಜನಗಣತಿ ವರದಿ ಅಸ್ತ್ರ ಪ್ರಬಲವಾಗಿ ಪ್ರಯೋಗವಾಗುತ್ತಿದೆ.
ಬಿಜೆಪಿ ಹಿಂದುಳಿದ ವರ್ಗಗಳ ನಾಯಕತ್ವದ ಕೊರತೆ ಎದುರಿಸುತ್ತಿದೆ. ಹೀಗಾಗಿಯೇ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಟ್ಯಾಕಲ್ ಮಾಡಲು ಆಗುತ್ತಿಲ್ಲ. ಈಗಾಗಲೇ ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪ ಹೊರಗೆ ಉಳಿದಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ ಸಂಸದರಾಗಿದ್ದಾರೆ. ಸುನೀಲ್ ಕುಮಾರ್ ಸಿಎಂಗೆ ಕೌಂಟರ್ ಕೊಡುತ್ತಲೇ ಹಿಂದುಳಿದ ವರ್ಗಗಳ ನಡುವೆ ಸ್ಟ್ರಾಂಗ್ ಸಂದೇಶ ಕೊಡಲು ಕಸರತ್ತು ನಡೆಸುತ್ತಿದ್ದಾರೆ.
ಇವುಗಳ ಮಧ್ಯೆಯೇ ಸಿಎಂ ಬಿಜೆಪಿ ಹಾಗೂ ಜೆಡಿಎಸ್ ಗೆ ಠಕ್ಕರ್ ಕೊಡುತ್ತ ಅಹಿಂತ ಮದ ಬ್ಯಾಂಕ್ ಕ್ರೋಢೀಕರಣ ಮಾಡಲು ಮುಂದಾಗಿದ್ದಾರೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.