ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ದರ್ಶನ್ರನ್ನು (Darshan) ಕೊನೆಗೂ ಹಾಸ್ಯ ನಟ ಸಾಧುಕೋಕಿಲ ಭೇಟಿ ಮಾಡಿ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧು ಕೋಕಿಲ, ದರ್ಶನ್ ಭೇಟಿ ಮಾಡಿದ ನಂತರ ಮನಸ್ಸಿಗೆ ಸಮಾಧಾನ ಆಯಿತು. ಎಲ್ಲಾ ಸ್ನೇಹಿತರು ನಟ ದರ್ಶನ್ ರನ್ನು ಭೇಟಿ ಮಾಡಿದೇವು. ದರ್ಶನ್ ಕೂಲ್ ಆಗಿ ಇದ್ದರು ಎಂದು ಹೇಳಿದ್ದಾರೆ.
ಸೆಲ್ನಲ್ಲಿ ಬುಕ್ಸ್ ಓದಿಕೊಂಡು ಕೂಲ್ ಅಂಡ್ ಕಾಮ್ ಆಗಿ ಇದ್ದಾರೆ. ಅವರನ್ನು ನೋಡಿ ನಮಗೂ ನೆಮ್ಮದಿ ಸಿಕ್ತು ಎಂದಿದ್ದಾರೆ. ಕಳೆದ ಮಂಗಳವಾರ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. `ಮೆಜೆಸ್ಟಿಕ್’ ಸಿನಿಮಾ ನಿರ್ಮಾಪಕ ರಾಮಮೂರ್ತಿ ಮತ್ತು ಇತರೆ ಸ್ನೇಹಿತರು ಭೇಟಿ ಮಾಡಬೇಕಿತ್ತು. ವಾರಕ್ಕೆ ಎರಡೇ ಎಂಟ್ರಿಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕರಿಲ್ಲ. ದರ್ಶನ್ ಏನೂ ಅಂತ ನನಗೆ ಚೆನ್ನಾಗಿ ಗೊತ್ತು. ಒಬ್ಬ ಬ್ರದರ್ ಆಗಿ ದರ್ಶನ್ ನೋಡೋಕೆ ಬಂದಿದ್ದೇನೆ. ದರ್ಶನ್ ಒಳಗೆ ಆರೋಗ್ಯವಾಗಿದ್ದಾರೆ. ಕಾನೂನು ರೀತಿಯಲ್ಲಿ ನಟ ದರ್ಶನ್ಗೆ ಚಿಕಿತ್ಸೆ ಮತ್ತು ಇತರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ರೊಂದಿಗೆ ಸಚ್ಚಿದಾನಂದ, ನಿರ್ಮಾಪಕ ರಾಮಮೂರ್ತಿ ಇದ್ದರು.