ಆಕ್ಷನ್ ಪ್ರಿನ್ಸ್ ಹೊಸ ಸಿನಿಮಾಗೆ ಭರ್ಜರಿ ವೇದಿಕೆ ಸಜ್ಜಾಗುತ್ತಿದೆ. ಸದ್ಯ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿ ತೊಡಗಿರುವ ಧ್ರುವ ಸರ್ಜಾ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ಓಕೆ ಅಂದಿದ್ದಾರೆ.
ಹೌದು, ಸ್ಯಾಂಡಲ್ ವುಡ್ ಸ್ಟಾರ್ ಧ್ರುವ ಸರ್ಜಾ ಹೊಸ ಸಿನಿಮಾಗೆ ಮಫ್ತಿ ಖ್ಯಾತಿಯ ನರ್ತನ್ ಸಾರಥಿಯಾಗುವ ಲಕ್ಷಣಗಳು ಕಾಣುತ್ತಿವೆ.
ಭರ್ಜರಿ ಆಕ್ಷನ್ ಹೊಂದಿರುವ ಸಿನಿಮಾ ಕತೆಯನ್ನು ಧ್ರುವ ಸರ್ಜಾ ಈಗಾಗಲೇ ಓಕೆ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಕನ್ನಡದ ಎರಡು ದೊಡ್ಡ ಬ್ಯಾನರ್ ಗಳಲ್ಲಿ ಒಬ್ಬರು ಬಂಡವಾಳ ಹೂಡುವ ಸಾಧ್ಯತೆಗಳಿವೆ. ನರ್ತನ್-ಧ್ರುವ ಕಾಂಬಿನೇಷನ್ ನ ಚಿತ್ರಕ್ಕೆ ಕೆವಿಎನ್ ಇಲ್ಲಾ ಹೊಂಬಾಳೆ ಫಿಲ್ಮ್ಸ್ ಹಣ ಹಾಕುವ ಸಾಧ್ಯತೆಗಳಿವೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಹೊರಬೀಳೋ ಸಾಧ್ಯತೆಗಳಿವೆ.