ಹಾವೇರಿ : ಅಕ್ಕನ ಮಗಳ ಜತೆ ಸಲುಗೆಯಿಂದ ಮಾತನಾಡಿದ ಆರೋಪಕ್ಕೆ ಯುವಕನ್ನು ಒಂಟಿಯಾಗಿ ಕರೆದೊಯ್ದು ಕಿರಾತಕರು ಮಾರಕಾಸ್ತ್ರದಿಂದ ಹಲ್ಲೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿನ ಅಬ್ದುಲ್ ಕಲಾಂ ಶಾಲೆಯಲ್ಲಿ ನಡೆದಿದೆ.
ಹಾನಗಲ್ ನಿವಾಸಿ ಗುಲಾಮ ಮುಸ್ತಫಾ (22) ಹಲ್ಲೆಗೊಳಗಾದ ಯುವಕ.ಈತ ಮಲ್ಲಿಕ ಎಂಬಾತನ ಅಕ್ಕನ ಮಗಳ ಜೊತೆ ಸಲುಗೆಯಿಂದಿದ್ದ ಎಂಬ ಕಾರಣಕ್ಕೆ ಮಲ್ಲಿಕ ದೊಡ್ಡಮನಿ, ಸಾಧಿಕ ಅತ್ತಾರ, ಸಮೀರ ಚೌಧರಿ ಸೇರಿ ಹಲ್ಲೆ ಮಾಡಿದ್ದಾರೆ.
ಐದು ತಿಂಗಳ ಹಿಂದಷ್ಟೇ ಹಿರಿಯ ಸಮ್ಮುಖದಲ್ಲಿ ರಾಜಿ ಮಾಡಲಾಗಿದೆ. ಆದರೂ ದ್ವೇಷ ಜೀವಂತವಾಗಿರಿಸಿದ್ದ ಆರೋಪಿ ಮಲ್ಲಿಕ ದೊಡ್ಡಮನಿ ನಿನ್ನೆ ತಡರಾತ್ರಿ ಎಳನೀರು ತರೋಣ ಬಾ ಎಂದು ಕರೆದಿದ್ದ. ಮಲ್ಲಿಕ್ ಮಾತು ನಂಬಿ ಗುಲಾಮ ಮುಸ್ತಫಾ ಆತನ ಬೈಕ್ ನಲ್ಲೇ ತೆರಳಿದ್ದ. ಬಳಿಕ ಅಬ್ದುಲ್ ಕಲಾಂ ಶಾಲೆ ಆವರಣಕ್ಕೆ ಸ್ನೇಹಿತರನ್ನ ಕರೆಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಅಲ್ಲಿಂದ ರಕ್ತಮಡುವಿನಲ್ಲೇ ಓಡಿ ಮುಸ್ತಫಾ ಆಸ್ಪತ್ರೆ ಸೇರಿದ್ದಾನೆ. ಸದ್ಯ ಈ ಘಟನಾ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ ಲಂಕಾ ಗೆಲುವಿನ ಹಿಂದಿದೆ ಇಬ್ಬರು ಭಾರತೀಯರ ‘ಮಾಸ್ಟರ್ ಪ್ಲಾನ್’ | ಜಯಸೂರ್ಯ ಹೇಳಿದ್ದೇನು?



















