ಬೆಂಗಳೂರು : ಮೆಜೆಸ್ಟಿಕ್ನಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದ ಘಟನೆ ನಡೆದಿದ್ದು, ಮಾಜಿ ಸಿಎಂ ಗುಂಡೂರಾವ್ ಅವರ ಪ್ರತಿಮೆಯನ್ನು ವಿರೂಪಗೊಳಿಸಲು ಯತ್ನಿಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬಳ್ಳಾರಿ ಮೂಲದ ವೀರಭದ್ರ ಎಂಬಾತ ಪಿಕಾಸಿ ಹಿಡಿದು ಪ್ರತಿಮೆಯನ್ನು ಒಡೆಯಲು ಯತ್ನಿಸಿದ್ದಾನೆ. ಈತ ಮಾನಸಿಕ ಅಸ್ವಸ್ಥನಾಗಿದ್ದಾನೆಂದು ತಿಳಿದುಬಂದಿದ್ದು, ಏಕಾಏಕಿ ಪ್ರತಿಮೆಯ ಬಳಿ ಗದ್ದಲ ಸೃಷ್ಟಿಸಿದ್ದಾನೆ.
ಯುವಕನ ಈ ವರ್ತನೆ ಗಮನಿಸಿದ ಸರ್ವಾಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ಧಾರೆ.
ಈ ವೇಳೆ ಪೊಲೀಸ್ ಪೇದೆ ಮೇಲೆ ಪಿಕಾಸಿಯಿಂದ ಹಲ್ಲೆ ಮಾಡಲು ಕೂಡ ಯುವಕ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರ ಸಹಾಯದಿಂದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಹೈವೇಯಿಂದ ರಸ್ತೆ ಬದಿ ಜಮೀನಿಗೆ ನುಗ್ಗಿದ ಬಸ್.. ತಪ್ಪಿದ ಭಾರಿ ಅನಾಹುತ!



















