ಕಾರವಾರ: ಉದ್ಯೋಗಕ್ಕಾಗಿ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಿವಾಜಿ ಚೌಕ್ ಹತ್ತಿರ ನಡೆದಿದೆ. ಓರ್ವ ಮುಸ್ಲಿಂ ಯುವತಿಯನ್ನು ಕೆಲಸ ಕೊಡಿಸಲು ಶಿರಸಿ ರೋಟರಿ ಆಸ್ಪತ್ರಗೆ ಕರೆದುಕೊಂಡು ಬಂದಿದ್ದ. ಶಿರಸಿ ತಾಲೂಕಿನ ಕೊರ್ಲಕಟ್ಟಾ ಗೌಡಕೊಪ್ಪದ ವೀರೇಂದ್ರ ಜೀನದತ್ತ ಜೈನ್ (21) ಮೇಲೆ ಶಕೀಲ್ ಅಹ್ಮದ್ (24), ಮಹಮ್ಮದ್ ಮಾಜ್ (26) ಹಾಗೂ ಶಿರಸಿ ಗೋಲಗೇರಿ ಓಣಿಯ ಉಬೇದ್ ಸವಣೂರ್ (25) ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಚನ್ನಾಪುರ ನಿವಾಸಿ ಉಸ್ಮಾ ಬಾನು ಹಾಗೂ ವೀರೇಂದ್ರ ಜಿನದತ್ತ ಜೈನ್ ಹತ್ತಿರದ ಊರಿನವರಾಗಿದ್ದರಿಂದ ಇಬ್ಬರ ಪರಿಚಯವಿತ್ತು. ಉಸ್ಮಾ ಬಾನು ಈ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿದ್ದರು. ಹೀಗಾಗಿ ಆಕೆಗೆ ಉದ್ಯೋಗ ಕೊಡಿಸಲು ವೀರೇಂದ್ರ ಜಿನದತ್ತ ಜೈನ್, ತಾನು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.