ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ಸಮೀಪದ ಮುಳ್ಳೂರು ಗ್ರಾಮದಲ್ಲಿರುವ ಲಕ್ಷ್ಮೀಕಾಂತಸ್ವಾಮಿ ದೇವಾಲಯದಲ್ಲಿ ಮೀತಿ ಮೀರಿ ನಡೆಯುತ್ತಿದೆ ಅಕ್ರಮ ಚಟುವಟಿಕೆಗಳು.

ನಿಷೇಧಿತ ಪ್ರದೇಶವಾದ್ರು ದೇವಸ್ಥಾನದ ಬಳಿಯೇ ಶಾಮಿಯಾನ ಅಳವಡಿಸಿ ಮದ್ಯ ಸೇವನೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸುಮಾರು 800 ವರ್ಷಗಳ ಹಳೆಯ ಚೋಳರ ಕಾಲದ ದೇವಾಸ್ಥಾನವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆವರಣದ ಒಳಗೆ ಯಾವುದೇ ವಸ್ತುಗಳನ್ನು ಕೊಂಡೊಯ್ಯಲು ಅನುಮತಿಯಿಲ್ಲವಾದರೂ, ಸಂರಕ್ಷಿತ ಪ್ರದೇಶದ ಒಳಗಡೆ ಮೋಜು-ಮಸ್ತಿ ಮಾಡಲಾಗುತ್ತಿದೆ.

ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ, ಅಕ್ರಮ ಎಸಗಿದ ಕಿಡಿಗೇಡಿಗಳು ಹಾಗೂ ಮೇಲಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.