ಬೆಂಗಳೂರು: ಇದು ಸೋಷಿಯಲ್ ಮೀಡಿಯಾ ಜಮಾನ. ಈ ಕಾಲಘಟ್ಟದಲ್ಲಿ ಯೂಟ್ಯೂಬರ್ ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್ ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ ಮಾಡಿದ್ದಾರೆ.
ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡುತ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.

ಫೆಬ್ರವರಿ 2025 ಭಾರತದ ಅತ್ತಾರಿ ಗಡಿಯಿಂದ ಪಾಕಿಸ್ತಾನದ ಅಫೀಷಿಯಲ್ ವೀಸಾ ಒಂದಿಗೆ ಪಾಕಿಸ್ತಾನದ ವಾಗಾ ಗಡಿಯ ಕಡೆಗೆ ಕಾಲಿಟ್ಟು ಅಲ್ಲಿಂದ 22 kms ದೂರದಲ್ಲಿ ಇರುವ ಲಾಹೊರ್ ನಗರಕ್ಕೆ ತಲುಪಿದೆ. ಅಂದಿನ ಸಂಜೆ ಸಿಖ್ ಸಮುದಾಯದ ದೇರಾ ಸಹಿಬ್ ಗುರುದ್ವಾರವನ್ನು ಅನ್ವೇಷಸಿ ನಂತರ ಲಾಹೋರ್ ನಗರದ ಸುಪ್ರಸಿದ್ಧ ಫುಡ್ ಸ್ಟ್ರೀಟ್ ಸುತ್ತಾಡಿ, ಅಲ್ಲಿಂದ ಬಹಳ ವಿಶೇಷವಾದ ಹವೇಲಿ ರೆಸ್ಟುರೆಂಟ್ ನಲ್ಲಿ ಬಾದ್ಶಾಹಿ ಮಸೀದಿಯ ವ್ಯೂ ನಲ್ಲಿ ಕುಳಿತು ರಾತ್ರಿಯ ಉಪಹಾರ ಮಾಡಿದೆ.
ಎರಡೇನೆಯ ದಿನ ಲಾಹೋರ್ ನ ಗಲ್ಲಿ ಗಳನ್ನು ಸುತ್ತಿ ಅಲ್ಲಿನ ಲೋಕಲ್ ಜೀವನವನ್ನು ಗಮನಿಸಿದ್ದು. ಅಂದು ಚಾಂಪಿಯನ್ಸ್ ಟ್ರೋಫಿ ಭಾರತದ ಹಾಗು ಪಾಕಿಸ್ತಾನದ ಪಂದ್ಯ ಎಂಜಾಯ್ ಮಾಡಿ, ಅಂದಿನ ದಿನ ಅಲ್ಲಿನ ಲೋಕಲ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಅವರ ಜೊತೆ ಮಾತಾಡಿದ್ದು ವಿಶೇಷವಾಗಿತ್ತು.
ಜೊತೆಯಲ್ಲಿ ಲಾಹೋರ್ ಪೊಲೀಸ್ ನ 24/7 ಬಂದೋಬಸ್ತ್ ಇರುತಿತ್ತು. ಪೊಲೀಸ್ ಕೈಯಲ್ಲಿ ಎಕೆ 47 ಬಂದೂಕು, ಪ್ರತಿ ಊರಿನ ಬದಲಾವಣೆಯ ದಿನ ಅಲ್ಲಿನ ಲೋಕಲ್ ಪೊಲೀಸ್ ಸ್ಟೇಷನ್ ಹೋಗಿ ನಾನು ರಿಜಿಸ್ಟರ್ ಮಾಡಬೇಕಾದದ್ದು, ಕಡ್ಡಾಯವಾಗಿತ್ತು. ಲಾಹೋರ್ ನ ರಂಗಲೀಲಾ ಆಟೋದಲ್ಲಿ ಓಡಾಡಿದ್ದು, ಮರೆಯಲಾರದ ಅನುಭವ. ಪಾಕಿಸ್ತಾನದ ಸರ್ವೇ ಸಾಮಾನ್ಯ ಜನರು ತುಂಬಾ ಖುಷಿಯಾಗಿದ್ದರು. ನಾನು ಭಾರತೀಯ ಅಂತ ತಿಳಿದಮೇಲೆ. ಒಬ್ಬರು ಕೂಡಾ ಕೋಪ ಆವೇಶ ತೋರಿಸಲಿಲ್ಲ ಎಂದಿದ್ದಾರೆ.

ಪಾಕಿಸ್ತಾನದ katasraj ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದು ನೆನಪಿನಲ್ಲಿ ಉಳಿಯುವಂತಹದ್ದು. ಅಲ್ಲಿ ಭಗವಾನ್ ಕೃಷ್ಣ ಸ್ಥಾಪಿಸಿರುವ ಶಿವಲಿಂಗಕ್ಕೆ ಕರ್ನಾಟಕದ ಪಂಚೆ ಸಿಲ್ಕ್ ಶರ್ಟ್ ಹಾಕಿ ಗ್ಲೋಬಲ್ ಕನ್ನಡಿಗ ಪೂಜೆ ಮಾಡಿದ್ದು ಬಹಳ ವಿಶೇಷ. ಅಲ್ಲಿ ಶ್ರೀ ರಾಮನ ದೇವಸ್ಥಾನ, ಹನುಮಂತನ ದೇವಸ್ಥಾನ ಕೂಡಾ ಭೇಟಿ ನೀಡಿ ಆಶೀರ್ವಾದ ಪಡೆದಿದ್ದು ವಿಶೇಷ.
ನಂತರ ಹೋಗಿದ್ದು ಒಂದು ಪಾಕಿಸ್ತಾನಿ ಹಳ್ಳಿಗೆ, ಅಲ್ಲಿನ ಜನರ ನಿತ್ಯ ಜೀವನ, ವ್ಯಾಪಾರ ವಹಿವಾಟು ತಿಳಿದು ಅವರ ಜೀವನ ಶೈಲಿ ಅರಿತಿದ್ದು ವಿಶೇಷ . ನಂತರ ಹೋಗಿದ್ದು ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಬಾದ್ ಗೆ, ಅಲ್ಲಿಯ ಮೆಲೋಡಿ ಮಾರುಕಟ್ಟೆ, ಲೋಕಲ್ ಸ್ಟ್ರೀಟ್ ಫುಡ್, ಅಲ್ಲಿನ ಉಡುಪುಗಳ ಅಂಗಡಿ ಹಾಗೆ ಅಲ್ಲಿನ ಪ್ರಸಿದ್ಧವಾದ ಹಿಲ್ ಸ್ಟೇಷನ್ ಆದ daman- e – koh ಗೆ ಮಳೆಯಲ್ಲಿ ಛತ್ರಿ ಹಿಡಿದು ಭೇಟಿ ನೀಡಿ ಅಲ್ಲಿ ಬಂದ ಲೋಕಲ್ ಜನರ ಜೊತೆ ಮಾತಾಡಿ ಅವರ ಅಭಿಪ್ರಾಯ ಅರಿತಿದ್ದು ಚೆನ್ನಾಗಿ ಇತ್ತು ಎಂದು ಹೇಳಿದ್ದಾರೆ.