ಹುಬ್ಬಳ್ಳಿ : ಜಮೀನು ಗುತ್ತಿಗೆ ವಿಚಾರಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.
ಹೊರವಲಯದ ಮಂಟೂರು ರಸ್ತೆಯ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಸಪ್ಪ ಕುಸುಗಲ್(60) ಸಾವನ್ನಪ್ಪಿರುವ ರೈತ. ನಿಂಗರೆಡ್ಡಿ, ದೊಡ್ಡರೆಡ್ಡಿ ಎನ್ನುವವರು ಎದೆಗೆ ಒದ್ದಿದ್ದರಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಹಾದೇವಿ ಗಂಜಾಳ ಎಂಬುವವರಿಗೆ ಸೇರಿದ್ದ ಮೂರು ಎಕರೆ ಜಮೀನನ್ನು ಹಲವು ವರ್ಷಗಳಿಂದ ಗುತ್ತೆಗೆ ಪಡೆದು ನಿಂಗರೆಡ್ಡಿ, ದೊಡ್ಡರೆಡ್ಡಿ ಉಳುಮೆ ಮಾಡುತ್ತಿದ್ದರು. ಆದರೆ, ಈ ಬಾರಿ ಮಾಲಕಿ ಉಳುಮೆ ಮಾಡುವುದು ಬೇಡ ಅಂದಿದ್ದರು. ಬದಲಾಗಿ ಬಸಪ್ಪ ಅವರಿಗೆ ಉಳುಮೆ ಮಾಡಲು ನೀಡಿದ್ದರು.
ಇದರಿಂದಾಗಿ ಬಸಪ್ಪನ ಮೇಲೆ ನಿಂಗರೆಡ್ಡಿ, ದೊಡ್ಡರೆಡ್ಡಿ ಸಿಟ್ಟಾಗಿದ್ದರು. ಆ ವೇಳೆ ಬಸಪ್ಪ, ಜಮೀನಿನಲ್ಲಿ ಬೀಜ ಬಿತ್ತೆನೆಗೆ ಮುಂದಾಗಿದ್ದರು. ಆದರೆ, ಜಮೀನಿಗೆ ತೆರಳಿ ಬಸಪ್ಪ ಜೊತೆಗೆ ನಿಂಗರೆಡ್ಡಿ, ದೊಡ್ಡರೆಡ್ಡಿ ಜಗಳ ಮಾಡಿದ್ದಾರೆ.
ಆ ವೇಳೆ ಬಸಪ್ಪನ ಎದೆಗೆ ಒದ್ದಿದ್ದಾರೆ. ಎದೆಗೆ ಒಳ ಪೆಟ್ಟಾಗಿ ಬಸಪ್ಪ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.