ರಾಮನಗ: ಒಂದೇ ಒಂದು ಗೇಣು ಜಾಗಕ್ಕಾಗಿ ಎಷ್ಟೆಷ್ಟೋ ಹೆಣಗಳು ಬಿದ್ದಿರುವ ಘಟನೆಗಳನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗಣಿ ಧನಿ ಮಾತ್ರ ಬರೋಬ್ಬರಿ 3 ಸಾವಿರ ಎಕರೆ ಪ್ರದೇಶವನ್ನು ಮಠಕ್ಕೆ ದಾನ ಮಾಡಿದ್ದಾರೆ.
ರಾಜಸ್ಥಾನ ಮೂಲದ ಪಿ.ಬಿ ಓಸ್ವಾಲ್ ಜೈನ್ ಎಂಬುವವರು, ತಮ್ಮ 78ನೇ ವಯಸ್ಸಿನಲ್ಲಿ 3 ಸಾವಿರ ಎಕರೆ ಆಸ್ತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿ ಮಠ(Palanahalli Mutt)ಕ್ಕೆ ದಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ.
ಉದ್ಯಮಿ ಓಸ್ವಾಲ್ ಅವರು ವ್ಯಾಪಾರ ವಹಿವಾಟಿನಿಂದ ಸಂಪಾದಿಸಿದ ಆಸ್ತಿ ಸಂಪತ್ತೆಲ್ಲವನ್ನೂ ದಾನದ ರೂಪದಲ್ಲಿ ಮಠಕ್ಕೆ ದೇಣಿಗೆ ಮಾಡಿದ್ದಾರೆ. ಆಸ್ತಿಯ ದಾಖಲೆಗಳನ್ನು ಮಠಕ್ಕೆ ಒಪ್ಪಿಸಿದ ಅವರು, ತಮ್ಮ ಸ್ವಯಾರ್ಜಿತ ಆಸ್ತಿ ಮಾತ್ರ ಇಬ್ಬರು ಮಕ್ಕಳಿಗೆ ನೀಡಿದ್ದಾರೆ.
ರಾಜಸ್ಥಾನ ಮೂಲದ ಉದ್ಯಮಿ ಕರ್ನಾಟಕದ ಮಠವೊಂದಕ್ಕೆ ಆಸ್ತಿ ಬರೆಯಲು ಕಾರಣ ನೋಡುವುದಾರೆ, ‘ ಉದ್ಯಮಿ ಓಸ್ವಾಲ್ ಅವರು ಕಳೆದ 27 ವರ್ಷದಿಂದ ಪಾಲನಹಳ್ಳಿ ಮಠದ ಭಕ್ತರು. ಕಂಪನಿ ಪ್ರಾರಂಭದ ದಿನದಿಂದಲೂ ಮಠದ ಶ್ರೀಗಳ ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯುತ್ತಿದ್ದರು. ಶ್ರೀಗಳ ಮಾರ್ಗದರ್ಶನದಿಂದ ಅವರು ಯಶಸ್ಸು ಕಂಡಿದ್ದರು. ಹೀಗಾಗಿ ಶ್ರೀಗಳ ಮಠಕ್ಕೆ ಎಲ್ಲವನ್ನೂ ಬರೆದು ಕೊಟ್ಟಿರುವುದಾಗಿ ಉದ್ಯಮಿ ಹೇಳಿದ್ದಾರೆ.