ಗದಗ : ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ನಲ್ಲಿ ನಡೆದಿದೆ.
ವಾಯುವಿಹಾರ ಮಾಡುತ್ತಿದ್ದವರ ಕಣ್ಣಿಗೆ ಕಳ್ಳ ಸಿಕ್ಕಿಬಿದ್ದಿದ್ದು, ರೈತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ರೈತರು ರೆಡ್ ಹ್ಯಾಂಡ್ ಆಗಿ ಜಮೀನಿನಲ್ಲೇ ಕಳ್ಳನನ್ನು ಹಿಡಿದಿದ್ದು, ಧರ್ಮದೇಟು ಕೊಟ್ಟಿದ್ದಾರೆ.
ಕಡಲೆ ಕಳ್ಳರ ಹಾವಳಿಗೆ ಕಂಗಲಾಗಿದ್ದ ರೈತರು, ಬೆಳಗಿನ ಜಾವ ಕಡಲೆ ಕಳ್ಳತನ ಮಾಡಿ ಎಸ್ಕೇಪ್ ಆಗುವಾಗ ಸಿಕ್ಕಿಬಿದ್ದ ಖದೀಮನನ್ನ ಕಂಬಕ್ಕೆ ಕಟ್ಟಿಹಾಕಿ, ಕೊರಳಿಗೆ ಕಡಲೆ ಗಿಡ ಮಾಲೆ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ : ಹಣದ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ | ಮನನೊಂದ ಪತ್ನಿ ಆತ್ಮಹತ್ಯೆ!



















