ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜರ್ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಂದ್ ಕಡೆ, ಸ್ಕೂಟರ್ ನಲ್ಲಿ ಬಂದ ಯುವಕರು ಅತಿರೇಕದ ವರ್ತನೆ ತೋರಿದ್ದಾರೆ.
ತಾವೇ ರಾಂಗ್ ರೂಟ್ನಿಂದ ಬಂದು ಕಾರು ಚಾಲಕನಿಗೆ ಅವಾಜ್ ಹಾಕಿ ಕಾರಿನ ಬಾನೆಟ್ ಗೆ ಹೊಡೆದಿದ್ದಾರೆ. ಈ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಗೇಟ್ ಬಳಿ ನಡೆದಿದ್ದು, ಘಟನೆಯ ದೃಶ್ಯ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮಾರದಲ್ಲಿ ಸೆರೆಯಾಗಿದೆ