ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

5 ಭಾಷೆ, 200 ಸಿನಿಮಾ…ಬಿ.ಸರೋಜಾದೇವಿ ಎಂದಿಗೂ ಅಮರ

July 15, 2025
Share on WhatsappShare on FacebookShare on Twitter

ಬೊಗಸೆಯಂತಹ ಕಣ್ಣುಗಳು, ಮುಖದ ತುಂಬ ಯಾವಾಗಲೂ ನಗು, ಮನೋಜ್ಞ ನಟನೆ, ಅತ್ಯದ್ಭುತ ವ್ಯಕ್ತಿತ್ವ, ಯಾರು ಬೇಕಾದರೂ ಪೂಜ್ಯನೀಯ ಭಾವದಿಂದ ಕಾಣಬಹುದಾದ ವ್ಯಕ್ತಿತ್ವ, ಹಿತವಾದ ಮಾತು, ನವಿಲಿನಂಥ ನಡೆ… ಹೌದು ಇಷ್ಟೆಲ್ಲ ಗುಣಗಳು ಬಿ.ಸರೋಜಾದೇವಿ ಎಂಬ “ಅಭಿನಯ ಸರಸ್ವತಿ’’ ಅವರಲ್ಲಿ ಮಾತ್ರ ನೆಲೆಸಿದ್ದವು. ದೇಶದ ಪ್ರಮುಖ ನಟರೊಂದಿಗೆ ನಟಿಸಿದರೂ, ತಾಯಿ ನೆಲ ಕರುನಾಡು, ತಾಯಿ ಭಾಷೆ ಕನ್ನಡದಲ್ಲಿ ಅಪಾರವಾದ ಸಾಧನೆಯನ್ನು ಅಚ್ಚೊತ್ತಿದ್ದ ಬಿ.ಸರೋಜಾದೇವಿ ಅವರು ನಮ್ಮನ್ನೆಲ್ಲ ಅಗಲಿ, ಬದುಕಿನ ಗಮ್ಯ ಸೇರಿದ್ದಾರೆ. ಆದ್ರೆ, ಅವರು ನಮ್ಮನ್ನು ಅಗಲಿದರೂ, ಅವರ ಪಾತ್ರಗಳು, ಅಪ್ರತಿಮ ಅಭಿನಯ, ಮನಮೋಹಕ ವ್ಯಕ್ತಿತ್ವವು ಕನ್ನಡಿಗರ ಎದೆಯಾಳದಲ್ಲಿ ಅಚ್ಚಳಿಯದೆ ಉಳಿಯಲಿವೆ.


ಚನ್ನಪಟ್ಟಣದ ‘ಬೊಂಬೆ’ ಈ ಸರೋಜಾದೇವಿ
ಬಾಲ್ಯದಿಂದಲೇ ಹಾಡು, ನೃತ್ಯ ಎಂದರೆ ಅಚ್ಚುಮೆಚ್ಚು
ಶ್ರೀರಾಮ ಪೂಜಾ ಎಂಬ ಸಿನಿಮಾ ಮೂಲಕ ಸಿನಿಮಾ ಪ್ರವೇಶ

ಬೊಂಬೆಗಳ ನಾಡು ಚನ್ನಪಟ್ಟಣ ತಾಲೂಕು ದಶವಾರ ಗ್ರಾಮದಲ್ಲಿ ಜನಿಸಿದ ಬಿ.ಸರೋಜಾದೇವಿ ಅವರಿಗೆ ಬಾಲ್ಯದಿಂದಲೂ ಹಾಡು, ನೃತ್ಯ ಎಂದರೆ ಅಚ್ಚುಮೆಚ್ಚಾಗಿತ್ತು. ಬೆಂಗಳೂರಿನ ಸೇಂಟ್ ಥೆರೆಸಾ ಶಾಲೆಯಲ್ಲಿ ಓದಿದ ಸರೋಜಾದೇವಿ ಅವರಿಗೆ ಬಣ್ಣದ ಬದುಕು ಅರಸಿ ಬಂದಿತು. ಹಾಗಾಗಿ, ಚಿಕ್ಕವಯಸ್ಸಿನಲ್ಲೇ ಅವರು “ಶ್ರೀರಾಮ ಪೂಜಾ” ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಅಲ್ಲಿಂದ, ಸರೋಜಾದೇವಿ ಅವರು ಹಿಂತಿರುಗಿ ನೋಡಲೇ ಇಲ್ಲ.


ಗಾಯಕಿಯಾಗುತ್ತಾರೆ ಎಂದವರು ನಟಿಯಾದರು
ನಟನೆ ಬಿಟ್ಟು ಶಾಲೆಗೆ ಹೋಗುವ ಇಚ್ಛೆಯೂ ಇತ್ತು
ರಾಷ್ಟ್ರಪ್ರಶಸ್ತಿ ಬಂದಿದ್ದು ಬದುಕಿಗೆ ತಿರುವು ನೀಡಿತು

ಶಾಲೆಯಲ್ಲಿದ್ದಾಗಲೇ ಹಾಡು, ನೃತ್ಯದಿಂದ ಸರೋಜಾದೇವಿ ಅವರು ಖ್ಯಾತಿ ಗಳಿಸಿದ್ದರು. ಬೆಂಗಳೂರಿನಲ್ಲಿರೋ ಪುರಭವನದಲ್ಲಿ ಅವರು ಹಾಡಿದ ಹಿಂದಿ ಗೀತೆ ಕೇಳಿ ಖ್ಯಾತ ನಟ ಹೊನ್ನಪ್ಪ ಭಾಗವತರ್ ಮನಸೋತಿದ್ದರು. ಈಕೆ ಹಿನ್ನೆಲೆ ಗಾಯಕಿ ಆಗ್ತಾರೆ ಅಂತ ಅವರು ಭಾವಿಸಿದ್ದದರು. ಆದ್ರೆ, ಸರೋಜಾದೇವಿ ಅವರ ಸೌಂದರ್ಯ ನೋಡಿ, ‘ಮಹಾಕವಿ ಕಾಳಿದಾಸ’ ಚಿತ್ರದ ನಟನೆಗೆ ಆಹ್ವಾನವಿತ್ತರು. ಕು.ರಾ. ಸೀತಾರಾಮ ಶಾಸ್ತ್ರಿ ಆ ಸಿನಿಮಾದ ನಿರ್ದೇಶಕರಾಗಿದ್ದರು. ಅದರಂತೆ ಸರೋಜಾದೇವಿ ಅವರು ‘ಮಹಾಕವಿ ಕಾಳಿದಾಸ’ ಸಿನಿಮಾದಲ್ಲಿ ನಟಿಸಿದ್ರು. ತಂದೆ-ತಾಯಿಗೆ ಸಿನಿಮಾ ಇಷ್ಟವಿರದ ಕಾರಣ ಸರೋಜಾದೇವಿ ಅವರು ಮತ್ತೆ ಶಾಲೆಗೆ ಹೋಗಲು ತೀರ್ಮಾನಿಸಿದ್ದರು. ಆದ್ರೆ, ‘ಮಹಾಕವಿ ಕಾಳಿದಾಸ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದ ಕಾರಣ ಇವರು ಬಣ್ಣದ ಬದುಕನ್ನೇ ಮುಂದುವರಿಸಿದ್ರು.


ಕನ್ನಡದ ದಿಗ್ಗಜ ನಟರೊಂದಿಗೆ ಸರೋಜಾದೇವಿ ನಟನೆ
ರಾಜ್ ಕುಮಾರ್, ಕಲ್ಯಾಣ್ ಕುಮಾರ್ ಜತೆ ತೆರೆ ಹಂಚಿಕೆ
“ನಿಮಗೇಕೆ ಕೊಡಬೇಕು ಕಪ್ಪ” ಎಂಬ ಡೈಲಾಗ್ ಈಗಲೂ ಜನಪ್ರಿಯ

ಮಹಾಕವಿ ಕಾಳಿದಾಸ ಸಿನಿಮಾ ಬಳಿಕ ಸರೋಜಾದೇವಿ ಅವರಿಗೆ ಹಲವು ಅವಕಾಶಗಳ ಬಾಗಿಲು ತೆರೆದವು. ಅದರಲ್ಲೂ, ನಾಡಿನ ಕುಮಾರತ್ರಯ ನಟರಾದ ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ್ ಕುಮಾರ್ ಅವರೊಟ್ಟಿಗೆ ನಟಿಸಿ ಸೈ ಎನಿಸಿಕೊಂಡರು. ಅಣ್ಣಾವ್ರ ಜತೆ ಸಾಲು ಸಾಲು ಸಿನಿಮಾ ಮಾಡಿದರು. ‘ಅಣ್ಣ ತಂಗಿ’ ಚಿತ್ರದಲ್ಲಿನ ದೇಸಿ ಸೊಗಡಿನ ಮಾತಿನಲ್ಲಿ ಇಬ್ಬರದ್ದೂ ಜುಗಲ್ಬಂದಿ. ‘ಭಾಗ್ಯವಂತರು’ ಚಿತ್ರದಲ್ಲಿನ ಭಾವತೀವ್ರತೆಯ ಕ್ಷಣಗಳನ್ನು ಇಬ್ಬರೂ ಜೀವಿಸಿರುವುದು ಕಣ್ಣಿಗೆ ಕಟ್ಟಿದಂತಿದೆ. ‘ಮಲ್ಲಮ್ಮನ ಪವಾಡ’, ‘ಬಬ್ರುವಾಹನ’ ಇವೆಲ್ಲವೂ ಸರೋಜಾದೇವಿ ನಟನಾಸಾಮರ್ಥ್ಯದ ನಿದರ್ಶನಗಳು, ಕಿತ್ತೂರು ರಾಣಿ ಚೆನ್ನಮ್ಮನಾಗಿ ಅವರು ‘ನಿಮಗೇಕೆ ಕೊಡಬೇಕು ಕಪ್ಪ’ ಎಂದು ಹೇಳಿರುವ ಸಂಭಾಷಣೆ ಈಗಲೂ ಅಚ್ಚಹಸಿರಾಗಿದೆ.

ಬೇರೆ ಭಾಷೆಗಳಿಗೂ ಕಾಲಿಟ್ಟರು ಸರೋಜಾದೇವಿ
ತಮಿಳು, ತೆಲುಗಿನಲ್ಲೂ ನಟನೆ ಮೂಲಕ ಖ್ಯಾತಿ
ಇವರು ತಮಿಳಿನಲ್ಲಿ “ಕನ್ನಡದ ಅರಗಿಣಿ” ಎಂದೇ ಫೇಮಸ್

ಕನ್ನಡದಲ್ಲಿ ನಟಿಸಿ ಸೈ ಎನಿಸಿಕೊಂಡ, ಅಪಾರ ಖ್ಯಾತಿ ಗಳಿಸಿದ ಸರೋಜಾದೇವಿ ಅವರಿಗೆ ಬೇರೆ ಭಾಷೆಗಳ ಸಿನಿಮಾಗಳೂ ಅರಸಿ ಬಂದವು. ಅದರಲ್ಲೂ, ತಮಿಳು ದಂತಕತೆ ಎಂಜಿಆರ್, ಶಿವಾಜಿ ಗಣೇಶನ್, ತೆಲುಗಿನ ಎನ್ ಟಿ ಆರ್ ಸಿನಿಮಾಗಳಲ್ಲಿ ನಟಿಸಿ ಅಲ್ಲೂ ಮನೆಮಾತಾದರು. ತಮಿಳಿನಲ್ಲಿ ಪಾಟ್ಟಾಲಿ ಮುತ್ತು, ಪಡಿಕಥ ಮೇಥೈ, ಕಲ್ಯಾಣ ಪರಿಸು, ತೆಲುಗಿನಲ್ಲಿ ಪಂಡರಿ ಭಕ್ತಲು, ದಕ್ಷಯಜ್ಞಂ, ಹಿಂದಿಯಲ್ಲಿ ಆಶಾ, ಮೆಹಂದಿ ಲಗಾ ಕೆ ರಖನಾ ಸೇರಿ ಹತ್ತಾರು ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು. ಅದರಲ್ಲೂ, ತಮಿಳಿಗರಂತೂ ಇವರನ್ನು “ಕನ್ನಡದ ಅರಗಿಣಿ” ಎಂದು ಕರೆದು ಹಾಡಿ ಹೊಗಳಿದರು.


ನಾಲ್ಕು ದಶಕಗಳವರೆಗೆ ಸಿನಿಮಾ ರಂಗದಲ್ಲಿ ಪಾರಮ್ಯ
200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ, ಹತ್ತಾರು ಪ್ರಶಸ್ತಿ
ಇಂತಹ ಅಭಿನಯ ಶಾರದೆಗೆ ಭಾವಪೂರ್ಣ ವಿದಾಯ

ನಾಲ್ಕು ದಶಕಗಳವರೆಗೆ ಸಿನಿಮಾ ರಂಗದಲ್ಲಿ ಮಿಂಚಿದ್ದ ಶಾರದಾದೇವಿ ಅವರ ಅಗಲಿಕೆಗೆ ದೇಶದ ಸಿನಿಮಾ ರಂಗವೇ ಕಂಬನಿ ಮಿಡಿದಿದೆ. ಐದು ಭಾಷೆಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಪದ್ಮಶ್ರೀ, ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ, ಎಂ.ಜಿ.ಆರ್. ಪ್ರಶಸ್ತಿ, ಎನ್.ಟಿ.ಆರ್. ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.

ಹೀಗೆ, ಪುಟ್ಟ ಹಳ್ಳಿಯಲ್ಲಿ ಜನಿಸಿ, ಪಂಚ ಭಾಷೆಗಳ ಸಿನಿಮಾ ರಂಗದಲ್ಲಿ ಮಿಂಚಿ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸಿದ್ದ ಎವರ್ ಗ್ರೀನ್ ಸುಂದರಿ ಬಿ.ಸರೋಜಾದೇವಿ ಇನ್ನು ನೆನಪು ಮಾತ್ರ ಎಂಬುದು ಕನ್ನಡಿಗರಿಗೆ, ಸಿನಿಪ್ರಿಯರಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಆದರೂ, ಬೊಗಸೆ ಕಂಗಳ ಚೆಲುವೆ ಎಂದಿಗೂ ಬೆಳ್ಳಿತೆರೆಯ ಮೂಲಕ ಅಮರ ಎಂಬುದರಲ್ಲಿ ಎರಡು ಮಾತಿಲ್ಲ.

Tags: 200 movies5 languagesB SarojadevibengalorecinemaDeathimmortal
SendShareTweet
Previous Post

ರಿಂಗ್‌ರೋಡ್‌ನಲ್ಲಿ ಭಾವೀ ಪತಿ ಗಿರೀಶ್‌ನನ್ನು ಕೊಂದಿದ್ದ ಶುಭಾಗೆ “ಕ್ಷಮಾದಾನ”ದ ಕೊನೇ ಅವಕಾಶ: ಸುಪ್ರೀಂ ಕೋರ್ಟ್ ಅಪರೂಪದ ತೀರ್ಪು!

Next Post

ಸರೋಜಾ ದೇವಿ ನಟನೆ ನೆನೆದ ಸಿಎಂ

Related Posts

‘ಸೀಟ್‌ ಎಡ್ಜ್‌’ ಸಸ್ಪೆನ್ಸ್ ಹಬ್ಬ ನೋಡಿದ್ರಾ..?
ಸಿನಿಮಾ-ಮನರಂಜನೆ

‘ಸೀಟ್‌ ಎಡ್ಜ್‌’ ಸಸ್ಪೆನ್ಸ್ ಹಬ್ಬ ನೋಡಿದ್ರಾ..?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾರು ಅಪಘಾತ | ನಜ್ಜುಗುಜ್ಜಾದ ಆಟೋ – ಇಬ್ಬರ ಸ್ಥಿತಿ ಗಂಭೀರ
ಸಿನಿಮಾ-ಮನರಂಜನೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾರು ಅಪಘಾತ | ನಜ್ಜುಗುಜ್ಜಾದ ಆಟೋ – ಇಬ್ಬರ ಸ್ಥಿತಿ ಗಂಭೀರ

ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ.. ಭರ್ಜರಿ ರೋಡ್​ ಶೋ, ಕಿಕ್ಕಿರಿದು ಸೇರಿದ ಫ್ಯಾನ್ಸ್‌!
ಸಿನಿಮಾ-ಮನರಂಜನೆ

ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ.. ಭರ್ಜರಿ ರೋಡ್​ ಶೋ, ಕಿಕ್ಕಿರಿದು ಸೇರಿದ ಫ್ಯಾನ್ಸ್‌!

ಕರೂರು ಕಾಲ್ತುಳಿತ ಪ್ರಕರಣ | 2ನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್‌!
ಸಿನಿಮಾ-ಮನರಂಜನೆ

ಕರೂರು ಕಾಲ್ತುಳಿತ ಪ್ರಕರಣ | 2ನೇ ಬಾರಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್‌!

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಭರ್ಜರಿ ಬಹುಮಾನ.. ಎಷ್ಟು ಲಕ್ಷ ಗೊತ್ತಾ?
ಸಿನಿಮಾ-ಮನರಂಜನೆ

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಕಿಚ್ಚ ಸುದೀಪ್ ಕಡೆಯಿಂದಲೂ ಭರ್ಜರಿ ಬಹುಮಾನ.. ಎಷ್ಟು ಲಕ್ಷ ಗೊತ್ತಾ?

BBK-12 ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ.. ಕೋಟ್ಯಾಂತರ ಮನಸ್ಸುಗಳನ್ನು ಗೆದ್ದ ಕರಾವಳಿ ಪೋರಿ!
ಸಿನಿಮಾ-ಮನರಂಜನೆ

BBK-12 ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ.. ಕೋಟ್ಯಾಂತರ ಮನಸ್ಸುಗಳನ್ನು ಗೆದ್ದ ಕರಾವಳಿ ಪೋರಿ!

Next Post
ಸರೋಜಾ ದೇವಿ ನಟನೆ ನೆನೆದ ಸಿಎಂ

ಸರೋಜಾ ದೇವಿ ನಟನೆ ನೆನೆದ ಸಿಎಂ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

ಬೆಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ | 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ!

ಬೆಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ | 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ!

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‍ಗೆ Z-ಪ್ಲಸ್ ಭದ್ರತೆ!

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‍ಗೆ Z-ಪ್ಲಸ್ ಭದ್ರತೆ!

Recent News

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

ಬೆಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ | 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ!

ಬೆಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ | 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ!

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‍ಗೆ Z-ಪ್ಲಸ್ ಭದ್ರತೆ!

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‍ಗೆ Z-ಪ್ಲಸ್ ಭದ್ರತೆ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

“ಹೌದು ಕೊಂದಿದ್ದು ನಾನೇ, ಆದರೆ ಅದು ಕೊಲೆಯಲ್ಲ” | ಆಸ್ಟ್ರೇಲಿಯಾ ನ್ಯಾಯಾಲಯದಲ್ಲಿ ಭಾರತೀಯ ಮೂಲದ ವ್ಯಕ್ತಿಯ ವಿಚಿತ್ರ ವಾದ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat