ಶಿವಮೊಗ್ಗ : ಗಮಕ ವಾಚನದಲ್ಲಿ 34 ಗಂಟೆಗಳ ನಿರಂತರ ವಾಚನ ನಡೆಸಿ ಶಿವಮೊಗ್ಗದ ಪ್ರಸಾದ್ ಭಾರತ್ವಜ್ ಹೊಸಹಳ್ಳಿ ಅವರು ಏಷ್ಯ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿ ಅಪೂರ್ವ ಸಾಧನೆ ಮಾಡಿದ್ದಾರೆ.

ಪದ್ಮಶ್ರೀ ಪುರಸ್ಕೃತ ಗಮಕ ಗಂಧರ್ವ ಹೆಚ್.ಆರ್. ಕೇಶವಮೂರ್ತಿಯವರ ಮೊಮ್ಮಗರಾದ ಪ್ರಸಾದ್ ಭಾರತ್ವಜ್, ಜನವರಿ 24ರಿಂದ 25ರವರೆಗೆ 34 ಗಂಟೆಗಳ ಕಾಲ ನಿರಂತರವಾಗಿ ಗಮಕ ವಾಚನ ನಡೆಸಿದರು.
ಶಿವಮೊಗ್ಗ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಈ ದಾಖಲೆ ಪ್ರಯತ್ನ ನಡೆಯಿತು. ನಿರಂತರ ಗಮಕ ವಾಚನದ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ ಪ್ರಸಾದ್ ಅವರ ಸಾಧನೆಗೆ ಸಾಹಿತ್ಯ ಹಾಗೂ ಸಂಗೀತ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
ಈ ಸಾಧನೆಯ ಮೂಲಕ ಪ್ರಸಾದ್ ಭಾರತ್ವಜ್ ಅವರ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯ ಬುಕ್ ಆಫ್ ರೆಕಾರ್ಡ್ನಲ್ಲಿ ಅಧಿಕೃತವಾಗಿ ದಾಖಲಾಗಿದೆ.
ಇದನ್ನೂ ಓದಿ : 77ನೇ ಗಣರಾಜ್ಯೋತ್ಸವ | ಬಾಗಲಕೋಟೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರರಿಂದ ಧ್ವಜಾರೋಹಣ



















