ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸಕೆರೆಹಳ್ಳಿ ಮನೆಯಲ್ಲಿ ಮೂರು ಲಕ್ಷ ಹಣ ಕಳ್ಳತನವಾಗಿದೆ ಎಂದು ಮ್ಯಾನೇಜರ್ ನಾಗರಾಜ್ ಮೂಲಕ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಲಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೆ.4 ರಂದು ಮನೆಯ ವ್ಯಾಡ್ರೂಬ್ ಕಾಟನ್ ಬಾಕ್ಸ್ ನಲ್ಲಿ ಹಣ ತೆಗೆದುಕೊಡಲು ಮ್ಯಾನೇಜರ್ ಗೆ ಹೇಳಿದ್ದರು. ಅವರು ಸ್ವಲ ಹಣ ತೆಗೆದು ಕೊಟ್ಟು ಉಳಿದ ಹಣ ಅಲ್ಲೇ ಇಟ್ಟಿದ್ದರು. ಅದೇ ದಿನ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದಾರೆ.
ಬಳಿಕ ಮ್ಯಾನೇಜರ್ ಮನೆಯ ಬೀಗವನ್ನು ತಾಯಿಗೆ ಕೊಟ್ಟು ಕೆಲಸದ ಮೇಲೆ ಹೊರಗೆ ತೆರಳಿದ್ದರು. ನಂತರ ವಿಜಯಲಕ್ಷ್ಮಿ ಸೆ.7 ರಂದು ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಸ.8 ರಂದು ವ್ಯಾಡ್ರೂಬ್ ನಲ್ಲಿ ಹಣ ನೋಡಿದಾಗ ನಾಪತ್ತೆಯಾಗಿದೆ. ಮನೆಯ ಎಲ್ಲಾ ಕಡೆ ಹುಡುಕಾಟ ನಡೆಸಿದರು ಹಣ ಸಿಗಲಿಲ್ಲ.
ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿಯದ ಕಾರಣ ಮನೆಯ ಕೆಲಸದವರ ಮೇಲೆ ಅನುಮಾನಿಸಿ ಮ್ಯಾನೇಜರ್ ನಾಗರಾಜ್ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.



















