ಷೇರು ಮಾರ್ಕೆಟ್ ನಲ್ಲಿ ಹಣ ಡಬಲ್ ಮಾಡೋ ಹೆಸರಿನಲ್ಲಿ ಪಂಗನಾಮ ಹಾಕಲಾಗಿದೆ. ಬೀದರ್ ನ ಟೆಕ್ಕಿಗೆ ಗಾಳ ಹಾಕಿದ್ದ ಮೂವರು ಖದೀಮರು ಹಣ ಡಬಲ್ ಮಾಡಿಕೊಡ್ತೀವಿ ಅಂತಾ ನಂಬಿಸಿ ವಂಚಿಸಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿರುವ ರಘುವೀರ್ ಜೋಶಿಯನ್ನು ಸಂಪರ್ಕಿಸಿದ್ದ ಆರೋಪಿಗಳಾದ ರಿದ್ದಿ, ನಿನಾದ, ಕೇಶವ ಹಣ ಡಬಲ್ ಮಾಡೋ ಆಸೆ ಹುಟ್ಟಿಸಿದ್ದಾರೆ. ಈ ವಂಚಕರ ಜಾಲದಲ್ಲಿ ಸಿಲುಕಿದ ಜೋಶಿ ತನ್ನ ಖಾತೆ ಸೇರಿದಂತೆ ಪತ್ನಿ, ಅತ್ತಿಗೆ ಖಾತೆಯಿಂದಲೂ ಖದೀಮರಿಗೆ ಹಣ ವರ್ಗಾವಣೆ ಮಾಡಿದ್ದಾರೆ.
ಈವರೆಗೂ ವಂಚಕರನ್ನೇ ನಂಬಿ ಜೋಶಿ 3 ಕೋಟಿ ವರ್ಗಾಯಿಸಿದ್ದಾರೆ. ಆದ್ರೀಗ ಹಣ ಕೈಸೇರ್ತಿದ್ದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಟೆಕ್ಕಿ ಸಂಪರ್ಕಿಸಲು ಯತ್ನಿಸಿದ್ರೆ ಆರೋಪಿಗಳೆಲ್ಲಾ ನಾಟ್ ರೀಚಬಲ್ ಆಗಿದ್ದಾರೆ. ಹೀಗಾಗಿ ತಾನು ಮೋಸ ಹೋದೆ ಅಂತಾ ಅರಿತ ರಘುವೀರ್ ಜೋಶಿ ಇದೀಗ ಬೀದರ್ ನ ಸೆನ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮರ ಬಂಧನಕ್ಕೆ ಖೆಡ್ಡಾ ತೋಡಿದ್ದಾರೆ.