ಅಕ್ರಮವಾಗಿ ಸಾಗಣೆ ಆಗುತ್ತಿದ್ದ 1.8 ಲಕ್ಷ ಲೀ. ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋವಾದಿಂದ ಭೂತಾನ್ ಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮದ್ಯವನ್ನು ಕೊಪ್ಪಳ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪ್ರಬಾರಿ ಅಪರ ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿತ್ತು. ಕೊಪ್ಪಳ ಹೊರ ಹೊಲಯದಲ್ಲಿನ ರಾಷ್ಟೀಯ ಹೆದ್ದಾರಿ 67 ರಲ್ಲಿ ಕಂಟೇನರ್ ತಪಾಸಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಅಕ್ರಮ ಸಾಗಾಟದ ಬಾಟಲಿ ಮೇಲೆ ತಯಾರಿಕೆ ದಿನಾಂಕ, ಬ್ಯಾಚ್ ನಂಬರ್ ನಮೂದಿಸಿಲ್ಲ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಪಾಸಣೆ ವೇಳೆ 2 ಸಾವಿರ ಕೇಸ್ ನಲ್ಲಿ ಒಟ್ಟು 1.8 ಲಕ್ಷ ಲೀಟರ್ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪಾಲೌಲನ ಅಬ್ದುಲ್ ಖಾದಿರ್, ಜೂಬೆನ್ ಎಂಬುವವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.