ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಯೂರಿಯಾ ಗೊಬ್ಬರ ಮಾತಿನ ಸಮರ ಜೋರಾಗಿದೆ. ರಸಗೊಬ್ಬರ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿ.ಸಿ ಪಾಟೀಲ್, ರಾಜ್ಯದ ಬಹುತೇಕ ಕಡೆ ರಸಗೊಬ್ಬರ ಕೊರತೆ ಉಂಟಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರಸಗೊಬ್ಬರ ಕೊಟ್ಟಿದೆ. ಕೇಂದ್ರದಿಂದ ಬಿಡುಗಡೆ ಆದ ರಸಗೊಬ್ಬರವನ್ನು ಯಾರಿಗೆ ಕೊಟ್ಟಿದ್ದಾರೆಂದು ಹೇಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗೊಬ್ಬರ ಕೊರತೆ ಎಂದು ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಗೊಬ್ಬರ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಕೇಂದ್ರ ಗೊಬ್ಬರ ಕೊಟ್ಟಿರುವುದಕ್ಕೆ ದಾಖಲಾತಿ ಸಾಕ್ಷಿ ಇರುತ್ತದೆ. ರಾಜ್ಯ ಸರ್ಕಾರ ಯಾವಾಗ ಸತ್ಯ ಹೇಳಿದೆ. ಸಮಸ್ಯೆ ಬಂದಾಗ ಕೇಂದ್ರದ ಮೇಲೆ ಆರೋಪ ಮಾಡುತ್ತದೆ ಅಷ್ಟೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



















