ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಮಹಿಳೆಯೊಬ್ಬರು ಕಿವಿ ಕಚ್ಚಿ ನಂತರ ನುಂಗಿರುವ ಘಟನೆಯೊಂದು ನಡೆದಿದೆ.
ಮನೆಯ ಗೇಟ್ ಹಾಕದಿರುವುದಕ್ಕೆ ರೊಚ್ಚಿಗೆದ್ದ ಮಹಿಳೆಯೊಬ್ಬಳು ನೆರೆಮನೆಯವನ ಕಿವಿ ಕಚ್ಚಿ ನಂತರ್ ಪೀಸ್ ನುಂಗಿದ್ದಾಳೆ. ರಾಮ್ವೀರ್ ಬಘೇಲ್ ಕಿವಿ ಕಳೆದುಕೊಂಡ ವ್ಯಕ್ತಿ. ಈ ವ್ಯಕ್ತಿ ಸೈಕಲ್ ರಿಕ್ಷಾ ಓಡಿಸುತ್ತಿದ್ದಾರೆ. ರಾಖಿ, ಆರೋಪಿ ಮಹಿಳೆ. ವ್ಯಕ್ತಿಯ ಕುಟುಂಬ ಹಾಗೂ ಮಹಿಳೆಯ ಕುಟುಂಬ ನ್ಯೂ ಆಗ್ರಾ ಪ್ರದೇಶದ ವಸತಿಗೃಹದಲ್ಲಿ ಬಾಡಿಗೆಯಲ್ಲಿ ವಾಸಿಸುತ್ತಿದ್ದವು. ರಾಖಿಯು ಇತರ ಬಾಡಿಗೆದಾರರೊಂದಿಗೆ ಪ್ರತಿದಿನವೂ ಜಗಳ ಮಾಡುತ್ತಿದ್ದಳು ಎಂದು ರಾಮ್ವೀರ್ ಆರೋಪಿಸಿದ್ದಾರೆ.
ಬಾಡಿಗೆದಾರರು ಮಗನಿಗೆ ಪರೀಕ್ಷೆ ಇದೆ ಎಂದು ಹೇಳಿದರು. ಹೀಗಾಗಿ ಬೆಳಗ್ಗೆ 6ಕ್ಕೆ ಮಗು ಬಿಡಲು ಹೊರಟಿದ್ದಾರೆ. ಆದರೆ, ತರಾತುರಿಯಲ್ಲಿ ಅವರು ಹೋಗಿದ್ದಕ್ಕೆ ಗೇಟ್ ಮುಚ್ಚುವುದನ್ನು ಮರೆತಿದ್ದಾರೆ. ಈ ವೇಳೆ ರಾಖಿ ರಾಮ್ವೀರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾಳೆ. ಆಗ ಅವರು ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ಆಗ ರಾಖಿ ಪತಿ ಸಂಜೀವ್ ಎಂಟ್ರಿ ಕೊಟ್ಟಿದ್ದಾನೆ. ಆತ ರಾಮ್ವೀರ್ನನ್ನು ಹಿಡಿದುಕೊಂಡಿದ್ದಾನೆ. ಸಂಜೀವ್ ಹಿಡಿದುಕೊಳ್ಳುತ್ತಿದ್ದಂತೆಯೇ ಸಿಟ್ಟಲಿದ್ದ ರಾಖಿ, ರಾಮ್ವೀರ್ ಕಿವಿಯನ್ನು ಜೋರಾಗಿ ಕಚ್ಚಿದ್ದಾಳೆ. ಪರಿಣಾಮ ಕಿವಿಯ ತುಂಡು ಆಕೆಯ ಬಾಯಲ್ಲಿತ್ತು. ಆದನ್ನು ಅದನ್ನು ಉಗುಳಲು ಹೇಳಿದ್ದಾರೆ. ಆದರೆ ಕೋಪದಿಂದಿದ್ದ ರಾಖಿ, ಅದನ್ನು ನುಂಗಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.